Advertisement

ಕೊಳವೆ ಒಡೆದಿದ್ದಕ್ಕೆ 16 ಗ್ರಾಮಗಳಿಗೆ ಹಬ್ಬಕ್ಕೆ ನೀರಿಲ್ಲ

04:08 PM Apr 13, 2021 | Team Udayavani |

ನಂಜನಗೂಡು: ಇಲಾಖೆಗಳ ಯಡವಟ್ಟಿನಿಂದ ಬರೋಬ್ಬರಿ 16 ಗ್ರಾಮ ಗಳಿಗೆ ಕುಡಿಯುವ ನೀರು ಇಲ್ಲದಂತಾಗಿದ್ದು, ಅದರಲ್ಲೂ ಹಬ್ಬದ ಹಿಂದೆ ಮುಂದೆಯೇ ನೀರಿಲ್ಲದೇ ಪರಿತಪಿಸುವಂತೆ ಆಗಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಇಲ್ಲಿನ ಪರಿಸ್ಥಿತಿಯನ್ನು ನೋಡಿದರೆ ಇನ್ನೂ ಸದ್ಯಕ್ಕೆ ನೀರು ಸಿಗುವುದು ಅನುಮಾನವಾಗಿದೆ.

Advertisement

16 ಹಳ್ಳಿಗಳಿಗೆ ನೀರು ಪೂರೈಕೆ ಯೋಜನೆ: ಕೌಲಂದೆ ಹೋಬಳಿಯ ಸುಮಾರು 57 ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು ಮಹದೇವನಗರದ ಪರ್ವತಾಂಜನೇಯನ ಗುಡ್ಡದ ಮೇಲೆ 2008ರಲ್ಲಿ ಬೃಹತ್‌ ಹೆಡ್‌ ಒವರ್‌ ಟ್ಯಾಂಕ್‌ ನಿರ್ಮಿಸಲಾಗಿದೆ. 5 ಲಕ್ಷ ಗ್ಯಾಲನ್‌ ನೀರು ಸಾಮರ್ಥ್ಯದ ಟ್ಯಾಂಕ್‌ಗೆ ಪ್ರತಿದಿನ ಕಬಿನಿ ನದಿ ಮೂಲಕ ನೀರು ತುಂಬಿಸಿ, ಗ್ರಾಮಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಅವೈಜ್ಞಾನಿಕ ಕಾಮಗಾರಿಯಿಂದಾಗಿ 57 ಹಳ್ಳಿಗಳಿಗೆ ನೀಡಬೇಕಾಗಿದ್ದ ನೀರನ್ನು ಕೇವಲ 16 ಗ್ರಾಮಗಳಿಗೆ ನೀಡಲಾಗುತ್ತಿದೆ. ಅದೂ ಕೂಡ ದಿನಬಿಟ್ಟು ದಿನ ನೀರು ಸರಬರಾಜು ಮಾಡಲಾಗುತ್ತಿದೆ.

ವಿದ್ಯುತ್‌ ಇಲಾಖೆ ಯಡವಟ್ಟು: ಗುಡ್ಡದ ಮೇಲೆ ಬೃಹತ್‌ ಹೆಡ್‌ ಒವರ್‌ ಟ್ಯಾಂಕ್‌ ನಿರ್ಮಿಸಲಾಗಿದ್ದು, ಇಲ್ಲಿರುವ ಹಳೆಯ ವಿದ್ಯುತ್‌ ಕಂಬಗಳನ್ನು ಬದಲಾಯಿಸಿ ಹೈಟೆಕ್‌ ವ್ಯವಸ್ಥೆ ಮಾಡಲು ಹೊರಟ ವಿದ್ಯುತ್‌ ಇಲಾಖೆ ಅಧಿಕಾರಿಗಳು ಕಾಮಗಾರಿ ನಡೆಸುವಾಗ ಜೆಸಿಬಿ ಯಂತ್ರಕ್ಕೆ ಸಿಲುಕಿ ಈ ಟ್ಯಾಂಕ್‌ಗೆ ನೀರು ಸರಬರಾಜಾ ಗುವ ಕೊಳವೆ ಒಡೆದುಹೊಗಿದೆ. ಹೀಗಾಗಿ ನೀರು ಗುಡ್ಡದಲ್ಲೇ ಸೋರಿಕೆಯಾಗುತ್ತಿರುವುದರಿಂದ ಗ್ರಾಮಗಳಿಗೆ ನೀರು ಪೂರೈಕೆ ಆಗುತ್ತಿಲ್ಲ. ಕೊಳವೆಗೆ ಹಾನಿಯಾದ ತಕ್ಷಣವೇ ವಿದ್ಯುತ್‌ ಇಲಾಖೆಯ ಗುತ್ತಿಗೆದಾರರು ಕಾಮಗಾರಿ ಸ್ಥಗಿತಗೊಳಿಸಿ ಯಾರಿಗೂ ಹೇಳದೆ ಅಲ್ಲಿಂದ ವಾಪಸ್ಸಾಗಿ ಮೌನ ವಹಿಸಿದರು.

ಇದೀಗ ಟ್ಯಾಂಕ್‌ಗೆ ನೀರು ತುಂಬಲು ಮೋಟಾರ್‌ ಚಾಲನೆ ಮಾಡಿದ ತಕ್ಷಣವೇ ಭಾರೀ ಪ್ರಮಾಣದ ನೀರು ನೀರು ಗುಡ್ಡದ ಮೇಲೆ ಸೋರಿಕೆಯಾಗುತ್ತಿದೆ. ಟ್ಯಾಂಕಿಗೆ ತೊಟ್ಟು ನೀರು ಸಹ ತಲು ಪುತ್ತಿಲ್ಲ. ಸದ್ಯದ ಮಟ್ಟಿಗೆ ಮೋಟರ್‌ ಸ್ಥಗಿತಗೊಳಿಸಲಾಗಿದ್ದು, ಕೌಲಂದೆ ಹೋಬಳಿಯ 16 ಗ್ರಾಮಗಳ ಜನರು ಕಳೆದ ಮೂರು ದಿನಗಳಿಂದನೀರಿಲ್ಲದೇ ಪರದಾಡುತ್ತಿದ್ದಾರೆ. ಇದಕ್ಕೆ ಹೊಣೆ ಯಾರು, ನಮಗೆ ನೀರುಪೂರೈಸುವವರು ಯಾರು, ಅದರಲ್ಲೂ ಯುಗಾದಿ ಹಬ್ಬದ ವೇಳೆಯೇಈ ಪರಿಸ್ಥಿತಿ ನಿರ್ಮಾಣವಾಗಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಅವ್ಯವಸ್ಥೆ ಕುರಿತು ಪ್ರತಿಕ್ರಿಯಿಸಿರುವ ಗ್ರಾಮೀಣ ನೀರುಸರಬರಾಜು ಇಲಾಖೆ, “ಗುಡ್ಡದ ಮೇಲೆ ನೀರು ಪೂರೈಕೆ ಕೊಳವೆ ಯನ್ನು ವಿದ್ಯುತ್‌ ಇಲಾಖೆಯವರು ಹಾನಿಪಡಿಸಿದ್ದಾರೆ. ಹೀಗಾಗಿ ಅವರೇ ಇದನ್ನು ದುರಸ್ತಿ ಮಾಡಬೇಕು’ ಎಂದು ಸ್ಪಷ್ಟನೆ ನೀಡಿದೆ.ಆದರೆ, ನೀರು ಪೂರೈಕೆ ಕೊಳವೆ ಒಡೆದಿರುವ ವಿದ್ಯುತ್‌ ಇಲಾಖೆಸದ್ಯಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಕೊಳವೆ ಒಡೆದುನಾಲ್ಕು ದಿನ ಕಳೆದರೂ ಯಾರೊಬ್ಬರೂ ದುರಸ್ತಿಗೆ ಮುಂದಾಗಿಲ್ಲ. ಒಟ್ಟಾರೆ ಇಲಾಖೆಗಳ ನಿರ್ಲಕ್ಷ್ಯ ಧೋರಣೆ, ಅಸಡ್ಡೆ ಮನೋಭಾವ ದಿಂದ16 ಹಳ್ಳಿಗಳ ಸಹಸ್ರಾರು ಮಂದಿ ನೀರಿಲ್ಲದೇ ಪರಿತಪಿ ಸು ವಂತಾಗಿದೆ. ಈ  ಅವ್ಯವಸ್ಥೆಗೆ ಗ್ರಾಮಸ್ಥರು ಹಿಡಿ ಶಾಪ ಹಾಕುತ್ತಿದ್ದಾರೆ.

Advertisement

ವಿದ್ಯುತ್‌ ಇಲಾಖೆಯೇ ಜವಾಬ್ದಾರಿ ಹೊರಲಿ :

ಗುಡ್ಡದ ಮೇಲೆ ವಿದ್ಯುತ್‌ ಕಂಬ ಬದಲಾಯಿಸುವಕಾಮಗಾರಿ ನಡೆಸುತ್ತಿದ್ದ ವಿದ್ಯುತ್‌ ಇಲಾಖೆಯೇಜೆಸಿಬಿ ಯಂತ್ರದ ಮೂಲಕ ಕೊಳವೆಯನ್ನುಒಡೆದಿದೆ. ಇಲಾಖೆ ಅಧಿಕಾರಿಗಳೇ ಕೊಳವೆಯನ್ನುದುರಸ್ತಿಪಡಿಸಬೇಕು. ಇಲ್ಲದಿದ್ದರೆ ಅದಕ್ಕೆ ಎಷ್ಟುಖರ್ಚಾಗುತ್ತದೆಯೋ ಅಷ್ಟು ಹಣವನ್ನು ನೀಡಿದರೆ ನಾವೇ ದುರಸ್ತಿಪಡಿಸಿ ಗ್ರಾಮಗಳಿಗೆ ನೀರು ಪೂರೈಸುತ್ತೇವೆ ಎಂದು ಗ್ರಾಮೀಣ ನೀರು ಸರಬರಾಜು ಇಲಾಖೆ ಅಧಿಕಾರಿ ರಂಗನಾಥ್‌ ತಿಳಿಸಿದ್ದಾರೆ.

ಜಟಾಪಟಿ ಬಿಟ್ಟು ಕೊಳವೆ ದುರಸ್ತಿಪಡಿಸಿ ನೀರು ಪೂರೈಸಿ :  ಎರಡು ಇಲಾಖೆಗಳ ಜಟಾಪಟಯಿಂದ 16 ಗ್ರಾಮಗಳ ಜನರು ಬಿರು ಬೇಸಿಗೆ ವೇಳೆ ನೀರಿಲ್ಲದೇ ಪರದಾಡುತ್ತಿದ್ದಾರೆ. ಕೊಳವೆ ಒಡೆದು ನಾಲ್ಕೈದು ದಿನ ಕಳೆದರೂ ದುರಸ್ತಿಗೆ ಯಾರೂಮುಂದಾಗುತ್ತಿಲ್ಲ. ಯುಗಾದಿ ಹಬ್ಬದ ಸಮಯದಲ್ಲೇ ನಮಗೆ ನೀರಿಲ್ಲ ದಂತಾಗಿದೆ. ಇನ್ನೆಷ್ಟು ದಿನ ಕಾಯಬೇಕು, ಯಾರು ಹೊಣೆಹೊರಬೇಕು ಎಂಬುದು ಗೊಂದಲ ಮಯವಾಗಿದೆ. ಅಸಡ್ಡೆಮನೋಭಾವ ಬಿಟ್ಟು ಇಲಾಖೆಗಳ ಅಧಿಕಾರಿಗಳು ಪರಸ್ಪರಮಾತುಕತೆ ನಡೆಸಿ, ಒಂದು ತೀರ್ಮಾನಕ್ಕೆ ಬಂದು ಕೊಳವೆದುರಸ್ತಿಪಡಿಸಿ ನಮಗೆ ನೀರು ಪೂರೈಸಬೇಕು ಎಂದು ಕೌಲಂದೆ ಹೋಬಳಿಯ ಬದನವಾಳು, ಕೌಲಂದೆ, ದೇವನೂರು ಚುಂಚನಳ್ಳಿ ಮತ್ತಿತರ ಹಳ್ಳಿಗಳ ಜನರು ಆಗ್ರಹಿಸಿದ್ದಾರೆ.

ವಿದ್ಯುತ್‌ ಇಲಾಖೆ ಅಧಿಕಾರಿಗಳು ಮಂಗಳವಾರ ಸಂಜೆಯೊಳಗೆ ಒಡೆದಿರುವ ಕೊಳವೆದುರಸ್ತಿಪಡಿಸಬೇಕು. ಇಲ್ಲದಿದ್ದರೆ ಬುಧವಾರ ನಾವೇಅದನ್ನು ದುರಸ್ತಿ ಮಾಡಿ ಗ್ರಾಮಗಳಿಗೆ ನೀರು ಪೂರೈಸಲುಕ್ರಮ ಕೈಗೊಳ್ಳುತ್ತೇವೆ. ಚರಿತಾ, ತಾಲೂಕು ಗ್ರಾಮೀಣ  ನೀರು ಸರಬರಾಜು ಅಧಿಕಾರಿ

 

 – ಶ್ರೀಧರ್‌ ಆರ್‌.ಭಟ್‌

Advertisement

Udayavani is now on Telegram. Click here to join our channel and stay updated with the latest news.

Next