Advertisement

ನೀರಿನ ಅಭಾವ; ಆರ್‌ಟಿಪಿಎಸ್‌ನ 2 ಘಟಕ ಸ್ಥಗಿತ

12:35 AM Jan 04, 2019 | |

ರಾಯಚೂರು: ನೀರಿನ ಅಭಾವದಿಂದಾಗಿ ರಾಯಚೂರು ಶಾಖೋತ್ಪನ್ನ ವಿದ್ಯುತ್‌ ಕೇಂದ್ರದ ಎರಡು ಘಟಕಗಳನ್ನು ಗುರುವಾರ ಸ್ಥಗಿತಗೊಳಿಸಲಾಗಿದೆ. 

Advertisement

ಇತ್ತೀಚೆಗೆ ವಿದ್ಯುತ್‌ ಪರಿವರ್ತಕ ಸುಟ್ಟಿರುವ ಕಾರಣ ಒಂದನೇ ಘಟಕ ಬಂದ್‌ ಮಾಡಲಾಗಿತ್ತು. 2ನೇ ಘಟಕವನ್ನು ದುರಸ್ತಿ ಕಾರ್ಯದ ನಿಮಿತ್ತ ಸ್ಥಗಿತಗೊಳಿಸಲಾಗಿದೆ. ಈಗ 7, 8ನೇ ಘಟಕಗಳನ್ನು ನೀರಿನ ಅಭಾವದಿಂದ ಸ್ಥಗಿತಗೊಳಿಸಲಾಗಿದೆ. ಇದರಿಂದ 1,720 ಮೆಗಾವ್ಯಾಟ್‌ ವಿದ್ಯುತ್‌ ಸಾಮರ್ಥ್ಯ ಘಟಕವೀಗ 647 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದಿಸುತ್ತಿದೆ. ಈಗಾಗಲೇ ಆಲಮಟ್ಟಿ ಜಲಾಶಯದಿಂದ ನೀರು ಹರಿಸಿದ್ದು, ಶುಕ್ರವಾರದೊಳಗೆ ಕೃಷ್ಣಾ ನದಿ ಜಾಕ್‌ವೆಲ್‌ ತಲುಪಲಿದೆ. ಸಮಸ್ಯೆ ಬಗೆಹರಿಯಲಿದೆ ಎಂದು ಆರ್‌ಟಿಪಿಎಸ್‌ ತಾಂತ್ರಿಕ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next