Advertisement

ಅಜೀಂ ಪ್ರೇಮಜೀ ಫೌಂಡೇಶನ್‌ ನೆರವು

05:14 PM Apr 22, 2020 | Naveen |

ವಾಡಿ: ಪಟ್ಟಣದ ಪಿಲಕಮ್ಮಾ ದೇವಿ ಬಡಾವಣೆಯ ಎರಡು ವರ್ಷದ ಮಗುವಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸೀಲ್‌ಡೌನ್‌ ತೆಕ್ಕೆಗೆ ಜಾರಿದ ನಾಲ್ಕು ರೆಡ್‌ ಜೋನ್‌ ಬಡಾವಣೆಗಳ ಅತ್ಯಂತ ಬಡ ಕುಟುಂಬಗಳಿಗೆ ಅಜೀಂ ಪ್ರೇಮಜೀ ಫೌಂಡೇಷನ್‌ ಬೆಂಗಳೂರು ಇವರ ವತಿಯಿಂದ ದಿನಸಿ ಕಿಟ್‌ ವಿತರಿಸಲಾಯಿತು.

Advertisement

ಸೀಲ್‌ಡೌನ್‌ ಬಡಾವಣೆಗಳಿಗೆ ಭೇಟಿ ನೀಡಿದ ನಾಲವಾರ ಉಪ ತಹಶೀಲ್ದಾರ್‌ ವೆಂಕನಗೌಡ ಪಾಟೀಲ, ಪುರಸಭೆ ಅಧ್ಯಕ್ಷೆ ಮೈನಾಬಾಯಿ ರಾಠೊಡ ಹಾಗೂ ಮುಖ್ಯಾ ಧಿಕಾರಿ ವಿಠ್ಠಲ ಹಾದಿಮನಿ ಅವರು ಮೊದಲೇ ಗುರುತಿಸಿ ಪಟ್ಟಿ ಮಾಡಲಾಗಿದ್ದ ಪಡಿತರ ಚೀಟಿ ವಂಚಿತ ಬಡ ಕುಟುಂಬಗಳಿಗೆ ಮತ್ತು ಗುಡಿಸಲುವಾಸಿ ಬಡಜನರಿಗೆ ಅಜೀಂ ಪ್ರೇಮಜೀ ಫೌಂಡೇಷನ್‌ ಒದಗಿಸಿದ ಆಹಾರ ದಾಸ್ತಾನು ವಿತರಿಸಿದರು.

ಹಿರಿಯ ಆರೋಗ್ಯ ನಿರೀಕ್ಷಕ ಶರಣಪ್ಪ ಮಡಿವಾಳ, ಈಡಿಗ ಸಮಾಜದ ಅಧ್ಯಕ್ಷ ಸುನೀಲ ಗುತ್ತೇದಾರ, ಈಶ್ವರ ಅಂಬೇಕರ್‌, ರಾಹುಲ ಹುಗ್ಗಿ, ವಿಜಯಕುಮಾರ ಮಂಗಳೂರ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next