Advertisement

ಕುಂದಾಪುರ ವ್ಯಾಸರಾಜ ಮಠ ಸ್ವಾಮೀಜಿ  ಪುರ ಮೆರವಣಿಗೆ

04:45 PM Mar 21, 2017 | Harsha Rao |

ಕುಂದಾಪುರ:  ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘ ಇವರ ನೇತೃತ್ವದಲ್ಲಿ ಕುಂದಾಪುರ ವ್ಯಾಸರಾಜ ಮಠದಲ್ಲಿ ನವೀಕೃತಗೊಂಡ ಶ್ರೀ ರಾಮಚಂದ್ರತೀರ್ಥಶ್ರೀ ಪಾದಂಗಳ ವರ ಮತ್ತು ಶ್ರೀ ಹಯಗ್ರೀವ ತೀರ್ಥ ಶ್ರೀ ಪಾದಂಗಳವರ ವೃಂದಾವನಗಳ ಉದ್ಘಾಟನೆ ಕಾರ್ಯಕ್ರಮದ ಪೂರ್ವ ಭಾವಿಯಾಗಿ ಶಾಸ್ತ್ರೀ ಪಾರ್ಕ್‌ನಿಂದ ಮಠದ ತನಕ ಪೂಜ್ಯ ಶ್ರೀಲಕ್ಷ್ಮೀಂದ್ರ ತೀರ್ಥ ಶ್ರೀ ಪಾದಂಗಳವರನ್ನು ವೈಭವದ ಪುರಮೆರವಣಿಗೆಯಲ್ಲಿ ಪೂರ್ಣ ಕುಂಭ ಸ್ವಾಗತದೊಂದಿಗೆ ಕರೆ ತರಲಾಯಿತು. 

Advertisement

ಪುರಮೆರವಣಿಗೆಯಲ್ಲಿ ಕಲಶ‌ ಹಿಡಿದ ಮಹಿಳೆಯರು ಸೇರಿದಂತೆ ಪಂಚವಾದ್ಯ ಗಳೊಂದಿಗೆ, ಚಂಡೆ, ಕೀಲುಕುದುರೆ, ತಟ್ಟಿರಾಯ, ಸಾವಿರಾರು ಭಕ್ತರು ಪುರಮೆರವಣಿಗೆಗೆ ಸಾಕ್ಷಿಯಾದರು. ತಾ| ಗಾಣಿಗ ಸೇವಾ ಸಂಘದ ಅಧ್ಯಕ್ಷ ಶ್ರೀನಿವಾಸ ಗಾಣಿಗ, ಕಾರ್ಯದರ್ಶಿ ಶಿವಾನಂದ ರಾವ್‌, ಕೋಶಾಧಿಕಾರಿ ಶಂಕರನಾರಾಯಣ ಗಾಣಿಗ, ಸಮಾಜದ ಹಿರಿಯ ಮುಖಂಡರಾದ ಸುಧೀರ್‌ ಪಂಡಿತ್‌, ಗೋಪಾಲ ರಾವ್‌ ಉಡುಪಿ, ದಾನಿಗಳಾದ ಕೆ.ಎಂ. ಶೇಖರ್‌ ಮತ್ತು ಕೆ.ಎಂ.ಲಕ್ಷ್ಮಣ,  ಜಿ.ಆರ್‌. ಚಂದ್ರಯ್ಯ, ಬಿ.ಎಸ್‌.ಮಂಜುನಾಥ್‌, ಗೋಪಾಲ ಚೆಲ್ಲಿಮಕ್ಕಿ, ಜಿಲ್ಲಾ ಯುವ ಸಂಘಟನೆ ಅಧ್ಯಕ್ಷ ದಿನೇಶ್‌ ಗಾಣಿಗ, ಬೆಂಗಳೂರು, ಮುಂಬಯಿ, ಶಿವಮೊಗ್ಗ, ಭದ್ರಾವತಿ, ಕುಮಟಾ, ದುಬಾೖ, ಬಾರಕೂರು, ಮಂಗಳೂರು, ಉಳ್ಳಾಲ ಗಾಣಿಗ ಸೇವಾ ಸಂಘದ ಅಧ್ಯಕ್ಷರು ಮತ್ತು ಸರ್ವ ಸದಸ್ಯರು, ಮಹಿಳಾ ಸಂಘಟನೆ, ಎಲ್ಲಾ ಘಟಕಗಳ ಅಧ್ಯಕ್ಷರು ಮತ್ತು ಸರ್ವ ಸದಸ್ಯರು  ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ರಾತ್ರಿ ಮಠದ ವೃಂದಾವನಗಳ ಸ್ಥಾನ ಶುಧಿದ್ಧಿ, ವಾಸ್ತು ಪೂಜೆ, ವಾಸ್ತು ಹೋಮ, ರಾಕ್ಷೊàಘ್ನ ಹೋಮ, ಪುಣ್ಯಾಹವಾಚನ ಸೇರಿದಂತೆ ಅನೇಕ ಧಾರ್ಮಿಕ ವಿಧಿಧಿವಿಧಾನಗಳು ವೇ|ಮೂ| ವಿಜಯ ಪೆಜತ್ತಾಯ ಇವರ ನೇತೃತ್ವದಲ್ಲಿ ನಡೆದವು.

Advertisement

Udayavani is now on Telegram. Click here to join our channel and stay updated with the latest news.

Next