Advertisement

ಸಿಂಧನೂರು ಎಆರ್ ಟಿಓ ಕಚೇರಿ ಮಂಜೂರಿಗೆ ಅಧಿವೇಶನದಲ್ಲಿ ಧ್ವನಿ

06:24 PM Mar 09, 2022 | Team Udayavani |

ಸಿಂಧನೂರು: ರಾಯಚೂರು ಜಿಲ್ಲೆಯಲ್ಲೇ ವಾಣಿಜ್ಯವಾಗಿ ವೇಗವಾಗಿ ಬೆಳೆಯುತ್ತಿರುವ ಸಿಂಧ‌ನೂರು ತಾಲೂಕಿನಲ್ಲಿ ಎಆರ್ ಟಿಓ ಕಚೇರಿ ಆರಂಭಿಸಬೇಕು ಎಂದು ಶಾಸಕ ವೆಂಕಟರಾವ್ ನಾಡಗೌಡ ಬುಧವಾರ ಸರಕಾರದ ಗಮನಸೆಳೆದಿದ್ದಾರೆ.

Advertisement

ಅಧಿವೇಶನದಲ್ಲಿ ಈ ಬಗ್ಗೆ ಮಾತನಾಡಿ, ಬೇಡಿಕೆ ಮಂಡಿಸಿದ್ದಾರೆ. ಆರ್ ಟಿಓ ಪ್ರಾದೇಶಿಕ ಕಚೇರಿಯನ್ನು ಆರಂಭಿಸಲು ಸಲ್ಲಿಕೆಯಾದ ಲಿಂಗಸುಗೂರು ಮತ್ತು ಸಿಂಧನೂರು‌ ಉಲ್ಲೇಖಿಸಲಾಗಿದೆ. ನನ್ನ ತಾಲೂಕು ಏಷ್ಯದಲ್ಲೇ ಅತಿಹೆಚ್ಚು ಟ್ರ್ಯಾಕ್ಟರ್ ಮಾರಾಟಕ್ಕೆ ಹೆಸರಾಗಿದೆ. ಅತಿಹೆಚ್ಚು ಪ್ರಮಾಣದಲ್ಲಿ ವಾಹನ ಖರೀದಿಯಾಗುತ್ತವೆ. ಸರಕಾರಕ್ಕೂ ಆದಾಯ ಬರುತ್ತದೆ. ಕೂಡಲೇ ಪ್ರಾದೇಶಿಕ‌ ಕಚೇರಿಯನ್ನು ಸಿಂಧನೂರಿನಲ್ಲಿ ಆರಂಭಿಸಲು ಸರಕಾರ ಆದೇಶ ಹೊರಡಿಸಬೇಕು ಎಂದು ಸರಕಾರವನ್ನು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next