Advertisement

ಟ್ವೀಟರ್‌ನಲ್ಲಿ ಸೆಹವಾಗ್‌ ಎಡವಟ್ಟು

06:45 AM Feb 06, 2018 | Team Udayavani |

ನವದೆಹಲಿ: ಭಾರತ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹವಾಗ್‌ ಟ್ವೀಟರ್‌ನಲ್ಲಿ ಅಂಪೈರ್ ವಿರುದ್ಧ ಟೀಕೆ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾರೆ.

Advertisement

ಮೂರು ದಿನಗಳ ಹಿಂದೆ ಭಾರತ-ದಕ್ಷಿಣ ಆಫ್ರಿಕಾ ನಡುವೆ ನಡೆದ 2ನೇ ಏಕದಿನ ಪಂದ್ಯದ ವೇಳೆ ಭಾರತದ ಗೆಲುವಿಗೆ 2 ರನ್‌ ಬೇಕಿತ್ತು. ಈ ವೇಳೆ ಭೋಜನ ಸಮಯವಾಗಿದ್ದರಿಂದ ಅಂಪೈರ್‌ಗಳು ಲಂಚ್‌ ಬ್ರೇಕ್‌ ನೀಡಿದ್ದರು. 2 ರನ್‌ಗಾಗಿ ಭಾರತ 40 ನಿಮಿಷ ಕಾಯಬೇಕಾಯಿತು. ಇದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಸೆಹವಾಗ್‌ ಕೂಡ ಅಂಪೈರ್‌ಗಳ ನಿರ್ಧಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟೀಕೆ ಮಾಡುವ ಗಡಿಬಿಡಿಯಲ್ಲಿ ಊಟದ ನಂತರ ಬನ್ನಿ ಎಂದು ಹೇಳಿ ಸಾರ್ವಜನಿಕ ಬ್ಯಾಂಕ್‌ಗಳು ಗ್ರಾಹಕರೊಂದಿಗೆ ವರ್ತಿಸುವಂತೆ ಎಂದು ಟ್ವೀಟ್‌ ಮಾಡಿದ್ದಾರೆ. 

ತಕ್ಷಣ ಕೆಲವು ಬ್ಯಾಂಕ್‌ ನೌಕರರು ಸೆಹವಾಗ್‌ಗೆ ಪ್ರತಿ ಟ್ವೀಟ್‌ ಮಾಡಿದ್ದಾರೆ. ನಾವು ಗ್ರಾಹಕರೊಂದಿಗೆ ಹಾಗೆ ಎಂದಿಗೂ ವರ್ತಿಸಿಲ್ಲ ಎಂದಿದ್ದಾರೆ. ಆಗ ಸೆಹವಾಗ್‌ಗೆ ಪರಿಸ್ಥಿತಿ ಅರ್ಥವಾಗಿದೆ. ನಾನು ಎಲ್ಲ ಬ್ಯಾಂಕ್‌ನವರು ಹಾಗೆ ಅಂತ ಹೇಳಿಲ್ಲ. ಕೆಲವರು ಹಾಗಿದ್ದಾರೆ ಎಂದು ಹೇಳಿದೆಯಷ್ಟೇ ಎಂದು ಸೆಹವಾಗ್‌ ಸಮಜಾಯಿಷಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next