Advertisement

ಜನರೊಂದಿಗೆ ಬೆಸೆದ ಗ್ರಾಮವಾಸ್ತವ್ಯ: ಸಚಿವ ಆರ್‌.ಅಶೋಕ್‌

11:55 PM Feb 26, 2023 | Team Udayavani |

ಕಲಾದಗಿ: ಗ್ರಾಮವಾಸ್ತವ್ಯದ ನೆನಪು ನನ್ನ ಜೀವನದಲ್ಲಿ ಅಚ್ಚಳಿಯದೆ ಉಳಿದಿದೆ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ಹೇಳಿದರು.

Advertisement

ಬಾಗಲಕೋಟೆ ಜಿಲ್ಲೆಯ ಕಲಾದಗಿಯಲ್ಲಿ ರವಿವಾರ ಮಾಧ್ಯಮದವರ ಜತೆ ಮಾತನಾಡಿದ ಅವರು, ಗ್ರಾಮವಾಸ್ತವ್ಯ ಅಪರೂಪದ ಕಾರ್ಯಕ್ರಮ. ಜನರ ಜತೆ ಬೆರೆತ ಕ್ಷಣಗಳು, ಪ್ರೀತಿ- ವಿಶ್ವಾಸ ಕೇವಲ ಕಾರ್ಯಕ್ರಮ ಉದ್ಘಾಟನೆ ಮಾಡಿ ಹೋದರೆ ಸಿಗುವುದಿಲ್ಲ. ಇಲ್ಲಿಯೇ ಜನರ ಜತೆಗಿದ್ದಾಗ ಮಾತ್ರ ಅವರ ಪ್ರೀತಿ-ವಿಶ್ವಾಸ-ನಂಬಿಕೆ ವೃದ್ಧಿಯಾಗುತ್ತದೆ.

ಪ್ರತಿಯೊಬ್ಬ ರಾಜಕಾರಣಿ ಕೂಡ ಈ ತರಹದ ಕಾರ್ಯಕ್ರಮ ಮಾಡಬೇಕು, ಜನರಿಗೆ ಹತ್ತಿರ ಆಗಬೇಕು. ನಮ್ಮನ್ನು ಆಯ್ಕೆ ಮಾಡುವ ಜನಗಳ ಜತೆ ಇದ್ದು, ಅವರ ಕಷ್ಟ ಸುಖದಲ್ಲಿ ನಾವೂ ಇದ್ದೇವೆ ಅನ್ನುವ ಭಾವನೆ ಬೆಳೆಸಬೇಕು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next