Advertisement

ವಿಜಯೇಂದ್ರ ಸೂಪರ್ ಸಿಎಂ ಅಲ್ಲ, ಎಲ್ಲವೂ ಊಹಾಪೋಹ; ಸಚಿವ ವಿ.ಸೋಮಣ್ಣ

10:14 AM Feb 26, 2020 | keerthan |

ಬಳ್ಳಾರಿ: ರಾಜ್ಯ ಸರ್ಕಾರದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ವಿಜಯೇಂದ್ರ ಸೂಪರ್ ಸಿಎಂ ತರಹ ವರ್ತಿಸುತ್ತಿದ್ದಾರೆ ಎಂಬ ಆರೋಪಗಳಿಗೆ ನಕಾರ ವ್ಯಕ್ತಪಡಿಸಿದ ವಸತಿ ಸಚಿವ ವಿ.ಸೋಮಣ್ಣ, ಇವೆಲ್ಲಾ ಬರೀ ಊಹಾಪೋಹ ಎಂದು ಸ್ಪಷ್ಟಪಡಿಸಿದರು.

Advertisement

ನಗರದ ಮುಂಡರಗಿ ಪ್ರದೇಶದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಾನು 42 ವರ್ಷ ರಾಜಕೀಯದಲ್ಲಿದ್ದು, ಏಳು ಸಿಎಂಗಳನ್ನು ನೋಡಿದ್ದೀನಿ. ಸಾಕಷ್ಟು ರಂಪ ಮಾಡಿದ್ದೀನಿ. ಸಿಎಂ ಬದಲಾಗುವುದು ನೋಡಿದ್ದೀನಿ. ಈ ಆಧಾರದಲ್ಲಿ ಹೇಳುತ್ತೇನೆ ಯಡಿಯೂರಪ್ಪನವರಿಗೆ 78 ವರ್ಷ ವಯಸ್ಸಾದರೂ ಸಹ ಅವರು ಸಾಕಷ್ಟು ಚುರುಕಾಗಿದ್ದಾರೆ. ಅವರ ಮೆದುಳು ಸಾಕಷ್ಟು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಅವರ ಉತ್ಸಾಹ ಇಂದಿಗೂ ಕುಗ್ಗಿಲ್ಲ. ಹೀಗಿರುವಾಗ ಅವರು ತಮ್ಮ ಆಡಳಿತಕ್ಕೆ ಇನ್ನೊಬ್ಬರ ನೆರವು ಪಡೆಯುವುದು ಕೇವಲ ಊಹಾಪೋಹ ಎಂದ ಅವರು ಯಡಿಯೂರಪ್ಪ ಗುಡುಗಿದ್ರೆ ವಿಧಾನ ಸೌಧ ನಡುಗುತ್ತೆ ಎಂಬುದು ಇಂದಿಗೂ ಸಹ ನಿಜವೇ ಎಂದು ಸ್ಪಷ್ಟಪಡಿಸಿದರು.

ಯಡಿಯೂರಪ್ಪ ಪ್ರಶ್ನಾತೀತ ನಾಯಕ. ಅವರಿರುವಾಗ ಯಾರೂ ಸೂಪರ್ ಸಿಎಂ ಇಲ್ಲ ಹಸ್ತಕ್ಷೇಪದ ಪ್ರಶ್ನೆಯೇ ಇಲ್ಲ. ಇನ್ನು ಉತ್ತರಾಧಿಕಾರಿ, ಪತ್ತರಾಧಿಕಾರಿಯೂ ಇಲ್ಲವೇ ಇಲ್ಲ. ನಮ್ಮದು ರಾಷ್ಟ್ರೀಯ ಪಕ್ಷ, ಎಲ್ಲವನ್ನೂ ರಾಷ್ಟ್ರ ನಾಯಕರು ನಿರ್ಧಾರ ಮಾಡ್ತಾರೆ ಎಂದರು.

ಇನ್ನು ತಮ್ಮ ಖಾತೆ ಕುರಿತು ಮಾತನಾಡಿದ ಅವರು, ನನ್ನ ರಾಜಕೀಯ ಅನುಭವಕ್ಕೆ ಸಣ್ಣ ವಸತಿ ಇಲಾಖೆ ನೀಡಿದ್ದು ಬೇಸರವಿತ್ತು. ಆದರೆ ಜನರ ಕೆಲಸ ಮಾಡುವ ಇಲಾಖೆ ಸಾಕು. ನನಗೆ ಮುಖ್ಯಮಂತ್ರಿಯಾಗುವ ಯಾವುದೇ ಉದ್ದೇಶವಿಲ್ಲ. ಯಡಿಯೂರಪ್ಪ ಅವರೇ ಮುಂದಿನ ಮೂರೂವರೆ ವರುಷ ಸಿಎಂ ಆಗಲಿದ್ದಾರೆ ಎಂದು ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next