Advertisement

ಕೋರ್ಟಲ್ಲಾದರೂ ಧರ್ಮ ಪಡೀತೇವೆ; ಎಂಬಿ ಪಾಟೀಲ್‌

06:00 AM Dec 11, 2017 | |

ವಿಜಯಪುರ: ಬೌದ್ಧ ಧರ್ಮದಂತೆ ವಿಶ್ವ ಮಾನ್ಯವಾಗುವ ಅವಕಾಶ ಇದ್ದ ಲಿಂಗಾಯತ ಧರ್ಮಕ್ಕೆ ಕೆಲವರ ಕುತಂತ್ರದಿಂದ ಸಾಧ್ಯವಾಗಿಲ್ಲ. ಈಗ ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಸ್ವತಂತ್ರ ಧರ್ಮದ ಮಾನ್ಯತೆ ಸಿಗುವುದು ಖಚಿತವಾಗಿದೆ. ಸರ್ಕಾರಗಳು ನಮ್ಮ ಮನವಿಗೆ ಸ್ಪಂದಿಸದಿದ್ದರೆ ನ್ಯಾಯಾಲಯಕ್ಕೆ ಮೊರೆ ಹೋಗಿ ಸ್ವತಂತ್ರ ಧರ್ಮದ ಮಾನ್ಯತೆ ಪಡೆದೇ ಪಡೆಯುತ್ತೇವೆ ಎಂದು ಜಲಸಂಪನ್ಮೂಲ ಸಚಿವ ಡಾ.ಎಂ.ಬಿ.ಪಾಟೀಲ ಹೇಳಿದ‌‌ರು.

Advertisement

ನಗರದ ಡಾ.ಅಂಬೇಡ್ಕ‌ರ್‌  ಜಿಲ್ಲಾ ಕ್ರೀಡಾಂಗಣದಲ್ಲಿ ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗಾಗಿ ಶನಿವಾರ ಹಮ್ಮಿಕೊಂಡಿದ್ದ ಬೃಹತ್‌ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, “ಲಿಂಗಾಯತ ಧರ್ಮದ ಐತಿಹಾಸಿಕ ಹಿನ್ನೆಲೆಯನ್ನು ದಾಖಲೆ ಸಹಿತ ಸತ್ಯ ಹೇಳುವ ನಮ್ಮ ವಿರುದ್ಧ ನನ್ನ ಕ್ಷೇತ್ರದಲ್ಲಿ ಅಪಪ್ರಚಾರ ನಡೆಸಿದ್ದು, ಇಂಥ ಯಾವುದೇ ಅಪಪ್ರಚಾರದ ಹುನ್ನಾರ ನಡೆಸಿದರೂ 50 ಸಾವಿರ ಮತಗಳಿಂದ ನಾನು ಗೆಲ್ಲುವುದು ಖಚಿತ ಎಂದು ನನ್ನ ಕ್ಷೇತ್ರದ ಜನತೆ ನಿರ್ಧರಿಸಿದ್ದಾರೆ’ ಎಂದರು.

ಸಮಾಜದಲ್ಲಿ ಸಾಮಾಜಿಕ ಅಸಮಾನತೆ, ಲಿಂಗ, ಜಾತಿ, ವರ್ಣ ವ್ಯವಸ್ಥೆಯ ವಿರುದ್ಧ ಶೋಷಿತರಿಗೆ ಧ್ವನಿಯಾಗಲು ವಿಶ್ವಶ್ರೇಷ್ಠ ಧರ್ಮ ಸ್ಥಾಪಿಸಿದ ಬಸವಣ್ಣನರು ಜಗತ್ತಿನಲ್ಲಿರುವ ಶ್ರೇಷ್ಠ ಧರ್ಮಗಳ ಸಾಲಿನಲ್ಲಿ ಸೇರುವ ಅರ್ಹತೆ ಇರುವ ಧರ್ಮ ಸ್ಥಾಪಿಸಿದ್ದರೂ ವ್ಯವಸ್ಥಿತ ಹುನ್ನಾರದ ಫಲವಾಗಿ ಇದು ಸಾಧ್ಯವಾಗಿಲ್ಲ. ಈ ಕುರಿತು ನಮ್ಮ ಬಳಿ ಐತಿಹಾಸಿಕ ದಾಖಲೆಗಳಿದ್ದು, ಬಸವ ಜನ್ಮಭೂಮಿ ವಿಜಯಪುರ ಜಿಲ್ಲೆಯಲ್ಲಿ ಮೊಟ್ಟ ಮೊದಲ ಬಾರಿಗೆ ಬಿಡುಗಡೆ ಮಾಡಿದ್ದೇವೆ ಎಂದು ದಾಖಲೆ ಪ್ರದರ್ಶಿಸಿದರು.

“12ನೇ ಶತಮಾನದ ಕಲ್ಯಾಣ ಕ್ರಾಂತಿಯಲ್ಲಿ 1500 ಶರಣರನ್ನು ಹತ್ಯೆ ಮಾಡಿ ಜಾತಿ ವ್ಯವಸ್ಥೆ ಪೋಷಿಸಿದ ಜಾತಿ ವ್ಯವಸ್ಥೆಯ ಜನರು, ವಚನ ಸಾಹಿತ್ಯ ನಾಶಕ್ಕೆ ಮುಂದಾದಾಗ ಶರಣರು ನಮ್ಮ ಧರ್ಮಗ್ರಂಥ ವಚನಗಳನ್ನು ಸಂರಕ್ಷಿಸುವ ಕೆಲಸ ಮಾಡಿದ್ದಾರೆ. 1871ರವರೆಗೆ ಅಸ್ತಿತ್ವದಲ್ಲಿ ಲಿಂಗಾಯತ ಸ್ವತಂತ್ರ ಧರ್ಮಕ್ಕೆ 1881ರಲ್ಲಿ ಮೈಸೂರು ರಾಜ್ಯದಲ್ಲಿ ರಂಗಾಚಾರುÉ ಎಂಬ ಲಿಂಗಾಯತ ವಿರೋಧಿ ಅಧಿಕಾರಿಯ ಕೃತ್ಯದಿಂದಾಗಿ ಲಿಂಗಾಯತರನ್ನು ಹಿಂದೂ ಧರ್ಮಕ್ಕೆ ಸೇರ್ಪಡೆ ಮಾಡಿ ಶೂದ್ರರಲ್ಲಿ ಸೇರಿಸಲಾಯಿತು. ಈ ಹುನ್ನಾರದಿಂದಾಗಿ ಕನ್ನಡ ನೆಲದಲ್ಲಿ ಜನ್ಮ ತಳೆದ ಬಸವಣ್ಣ ಸ್ಥಾಪಿಸಿದ ಲಿಂಗಾಯತ ಧರ್ಮ ಇಲ್ಲವಾಗಿಸುವ ಕೃತ್ಯ ನಡೆಯಿತು’ ಎಂದು ಕಿಡಿ ಕಾರಿದರು.

ಸಾತಂತ್ರ್ಯಪೂರ್ವದಲ್ಲಿ ಹಾಗೂ ಸಂವಿಧಾನಕ್ಕೂ ಮುನ್ನವೇ ಅಸ್ತಿತ್ವದಲ್ಲಿದ್ದ ಲಿಂಗಾಯತ ಧರ್ಮಕ್ಕೆ 1881ರ ಮೊದಲು ಜೈನ, ಬೌದ್ಧ, ಸಿಖ್‌ ಪ್ರತ್ಯೇಕ ಧರ್ಮದ ಸ್ಥಾನಮಾನವಿತ್ತು. 1874ರ ಜನಗಣತಿ ಇದನ್ನು ಸ್ಪಷ್ಟಪಡಿಸುತ್ತದೆ. ಆದರೆ 1881ರ ಜನಗಣತಿಯಲ್ಲಿ ಪ್ರಪ್ರಥಮ ಬಾರಿಗೆ ಲಿಂಗಾಯತರನ್ನು ಪ್ರತ್ಯೇಕ ಧರ್ಮ ಎಂದು ನಮೂದಿಸದೇ ಹಿಂದೂ ಧರ್ಮದ ಶೂದ್ರ ಜಾತಿಯನ್ನಾಗಿ ಸೇರಿಸಲಾಯಿತು ಎಂದರು.

Advertisement

ವಿಶೇಷವೆಂದರೆ 1881ರ ಜನಗಣತಿಯಲ್ಲಿಯೂ ವೀರಶೈವ ಎಂಬ ಪದಪ್ರಯೋಗವೇ ಇಲ್ಲ. ಈ ಜನಗಣತಿಯಲ್ಲಿ ಪಂಚಾಚಾರ್ಯರು ಹಾಗೂ ಅಯ್ಯನವರು ಮೊದಲಾದವರನ್ನು ಶೂದ್ರ ಪಂಗಡಕ್ಕೆ ಸೇರಿಸಲಾಗಿತ್ತು. 1891ರಲ್ಲಿ ಮೊದಲ ಬಾರಿಗೆ ಗಾಂಜಾಂ ಮಠದ ನಂಜುಂಡ ಸ್ವಾಮಿಗಳು 1881ರ ಜನಗಣತಿ ವಿಚಾರವಾಗಿ ಮಹಾರಾಜ ಚಾಮರಾಜೇಂದ್ರ ಒಡೆಯರ ಅವರನ್ನು ಭೇಟಿಯಾಗಿ ಸಲ್ಲಿಸಿದ ಮನವಿಯಲ್ಲಿ ವೀರಶೆ„ವ ಬ್ರಾಹ್ಮಣ ಎಂಬ ಪದ ಪ್ರಯೋಗವಾಗಿದೆ. 

ವೀರಶೈವ ಮತವನ್ನು ಶೂದ್ರ ತರಗತಿಯಲ್ಲಿ ಸೇರಿಸಿರುವುದಕ್ಕೆ ಅಪಮಾನವಾಗಿದ್ದು ಈ ದುಃಖದಿಂದ ತಮ್ಮನ್ನು ಪಾರು ಮಾಡಬೇಕೆಂದು ಕೋರಲಾಗಿತ್ತು. ಆ ಪತ್ರವೂ ನಮಗೆ ಲಭಿಸಿದೆ ಎಂದರು.

ಈ ಐತಿಹಾಸಿಕ ಪ್ರಮಾದ ಸರಿಪಡಿಸುವುದಕ್ಕಾಗಿ ನಮ್ಮ ಹಿರಿಯರು ಸಾಕಷ್ಟು ಹೋರಾಟ ಮಾಡಿದ್ದರು. 1942ರಲ್ಲಿ ಸೊಲ್ಲಾಪುರದ ಕೆ.ಎಸ್‌. ಸರ್ದಾರ್‌ ಅಧ್ಯಕ್ಷತೆಯಲ್ಲಿ ನಡೆದ ಆಲ್‌ ಇಂಡಿಯಾ ಲಿಂಗಾಯತ ಅಡ್ವೆ$çಸರಿ ಕಮಿಟಿ ಫಾರ್‌ ರಿಕ್ರೂಟಿಂಗ್‌ ಸಭೆಯ ನಡಾವಳಿಯಲ್ಲಿಯೂ ಲಿಂಗಾಯತರಿಗೆ ಪ್ರತ್ಯೇಕ ಸ್ಥಾನಮಾನ ಕುರಿತು ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಲಾಗಿತ್ತು ಎಂದರು.

ಗದಗನ ಡಾ. ಸಿದ್ಧಲಿಂಗ ಶ್ರೀಗಳು, ಇಳಕಲ್‌ನ ಡಾ. ಮಹಾಂತ ಶ್ರೀಗಳು, ಕೂಡಲಸಂಗಮದ ಬಸವಜಯ ಮೃತ್ಯುಂಜಯ ಶ್ರೀಗಳು, ನಾಗನೂರು ಶ್ರೀಗಳು, ಭಾಲ್ಕಿ ಪಟ್ಟದದೇವರು, ಬೈಲೂರಿನ ನಿಷ್ಕಲ ಮಂಟಪದ ನಿಜಗುಣಾಂದ ಶ್ರೀಗಳು, ರಾಷ್ಟ್ರೀಯ ಬಸವಸೇನೆಯ ರಾಷ್ಟ್ರೀಯ ಅಧ್ಯಕ್ಷ, ಗಣಿ ಸಚಿವ ವಿನಯ ಕುಲಕರ್ಣಿ, ಸಚಿವರಾದ ಆರ್‌.ಬಿ. ತಿಮ್ಮಾಪುರ, ಶರಣಪ್ರಕಾಶ ಪಾಟೀಲ, ಮಾಜಿ ಸಚಿವರಾದ ಬಸವರಾಜ ಹೊರಟ್ಟಿ, ನಿವೃತ್ತ ಐಎಎಸ್‌ ಅಧಿ ಕಾರಿ ಡಾ. ಎಸ್‌.ಎಂ.ಜಾಮದಾರ, ಮಾಜಿ ಶಾಸಕ ಡಾ. ಎಂ.ಪಿ.ನಾಡಗೌಡ, ಸಂಸದ ಪ್ರಕಾಶ ಹುಕ್ಕೇರಿ, ಶಾಸಕರಾದ ಬಿ.ಆರ್‌. ಪಾಟೀಲ ಆಳಂದ, ಗಣೇಶ ಹುಕ್ಕೇರಿ, ಪ್ರಕಾಶ ತಪಶಟ್ಟಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next