Advertisement

ವಿಜಯಪುರ: ಬಸ್ ಡಿಕ್ಕಿ ಹೊಡೆದು ಎರಡೂ ಕಾಲುಗಳನ್ನು ಕಳೆದುಕೊಂಡ ವೃದ್ದೆ

05:35 PM Aug 25, 2020 | sudhir |

ವಿಜಯಪುರ: ನಗರ ಕೇಂದ್ರ ಬಸ್ ನಿಲ್ದಾಣದಲ್ಲಿ ಮಂಗಳವಾರ ಮಧ್ಯಾಹ್ನ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಡಿಕ್ಕಿ ಹೊಡೆದು ವೃದ್ಧೆಯ ಎರಡೂ ಕಾಲುಗಳು ತುಂಡಾಗಿರುವ ಘಟನೆ ನಡೆದಿದೆ.

Advertisement

ವಿಜಯಪುರ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದ ಘಟನೆಯಲ್ಲಿ 60ವರ್ಷದ ಅಪರಿಚಿತ ವೃದ್ಧೆಯೊಬ್ಬರು ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದು ಅವರು ಯಾರು ಎಂಬ ವಿವರ ಲಭ್ಯವಾಗಿಲ್ಲ.

ಕೆಎ 22 ಎಫ್ 2246‌ ಸಂಖ್ಯೆಯ ಬಸ್ ಕಲಬುರಗಿಯಿಂದ ವಿಜಯಪುರ ಮಾರ್ಗವಾಗಿ ಸಾಂಗಲಿಗೆ ಹೊರಟಿತ್ತು. ಅಪಘಾತ ಸಂಭವಿಸುತ್ತಲೇ ಬಸ್ ಚಾಲಕ ಪರಾರಿ ಆಗಿದ್ದು, ಕಾಲುಗಳನ್ನು ಕಳೆದುಕೊಂಡ ವೃದ್ಧೆಯನ್ನು ಸ್ಥಳೀಯರು ಚಿಕಿತ್ಸೆಗಾಗಿ ಸರಕಾರಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಿದ್ದಾರೆ.

ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿರುವ ಗಾಂಧಿಚೌಕ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next