Advertisement

ಇಂದು ಉಪರಾಷ್ಟ್ರಪತಿ ಚುನಾವಣೆ; ಧನ್ಕರ್‌ ಉಪರಾಷ್ಟ್ರಪತಿ? ಸಂಜೆಯೇ ಫ‌ಲಿತಾಂಶ ಪ್ರಕಟ

09:46 PM Aug 05, 2022 | Team Udayavani |

ನವದೆಹಲಿ: ಇದೇ 11ಕ್ಕೆ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರ ಅವಧಿ ಅಂತ್ಯವಾಗಲಿದ್ದು, ಇದಕ್ಕಾಗಿ ಶನಿವಾರ ಚುನಾವಣೆ ನಡೆಯಲಿದೆ.

Advertisement

ಈಗಿರುವ ಅಂಕಿ ಸಂಖ್ಯೆಗಳನ್ನು ನೋಡುವುದಾದರೆ, ಎನ್‌ಡಿಎ ಅಭ್ಯರ್ಥಿ ಜಗದೀಪ್‌ ಧನ್ಕರ್‌ ಅವರೇ ಗೆಲುವು ಸಾಧಿಸಲಿದ್ದಾರೆ ಎಂದೇ ಹೇಳಲಾಗುತ್ತಿದೆ. ಅಂದ ಹಾಗೆ ಸಂಜೆಯೇ ಫ‌ಲಿತಾಂಶ ಹೊರಬೀಳಲಿದ್ದು, ಗೆಲ್ಲುವ ಅಭ್ಯರ್ಥಿ 11ರಂದು ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ.

ಎನ್‌ಡಿಎಯಿಂದ ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಜಗದೀಪ್‌ ಧನ್ಕರ್‌ ಮತ್ತು ಪ್ರತಿಪಕ್ಷಗಳ ಕಡೆಯಿಂದ ಕಾಂಗ್ರೆಸ್‌ ನಾಯಕಿ ಮತ್ತು ಕರ್ನಾಟಕ ಮಾರ್ಗರೇಟ್‌ ಆಳ್ವಾ ಅವರು ಸ್ಪರ್ಧಿಸಿದ್ದಾರೆ. ಈ ಚುನಾವಣೆಯಲ್ಲಿ ಕೇವಲ ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರು ಮಾತ್ರ ಮತ ಹಾಕುವುದರಿಂದ ಇಲ್ಲಿ ಧನ್ಕರ್‌ ಅವರಿಗೆ ಗೆಲುವು ನಿಶ್ಚಿತ. ಏಕೆಂದರೆ, ಲೋಕಸಭೆ ಮತ್ತು ರಾಜ್ಯಸಭೆಗಳೆರಡರಲ್ಲೂ ಎನ್‌ಡಿಎ ಹೆಚ್ಚು ಸ್ಥಾನ ಹೊಂದಿದೆ.

ವಿಚಿತ್ರವೆಂದರೆ, ಲೋಕಸಭೆಯಲ್ಲಿ 36 ಸಂಸದರನ್ನು ಹೊಂದಿರುವ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್‌ ಪಕ್ಷ, ಚುನಾವಣಾ ಪ್ರಕ್ರಿಯೆಯಿಂದಲೇ ಹೊರಗುಳಿದಿದೆ. ಆಮ್‌ ಆದ್ಮಿ ಪಾರ್ಟಿ ಮತ್ತು ಜೆಎಂಎಂ ಪ್ರತಿಪಕ್ಷ ಅಭ್ಯರ್ಥಿಗೆ ಬೆಂಬಲ ಘೋಷಿಸಿದ್ದರೂ, ಗೆಲುವಿಗೆ ಬೇಕಾದ ಮತಗಳಿಲ್ಲ.

ಅಂದರೆ, ಲೋಕಸಭೆ ಮತ್ತು ರಾಜ್ಯಸಭೆಗಳನ್ನು ಸೇರಿಸಿ ಒಟ್ಟಾರೆಯಾಗಿ 788 ಮತಗಳಿವೆ. ಎನ್‌ಡಿಎ ಎರಡನ್ನೂ ಸೇರಿಸಿದರೆ 510 ಮತಗಳನ್ನು ಹೊಂದಿದೆ. ಪ್ರತಿಪಕ್ಷಗಳ ಬಳಿ ಸುಮಾರು 200 ಮತಗಳಿವೆ. ಆದರೆ, ಅಧ್ಯಕ್ಷೀಯ ಚುನಾವಣೆಯಲ್ಲಿ ಬಹಳಷ್ಟು ಅಡ್ಡಮತಗಳಾಗಿದ್ದು, ಇಲ್ಲೂ ಅದೇ ಮುಂದುವರಿದರೆ ಪ್ರತಿಪಕ್ಷಗಳ ಅಭ್ಯರ್ಥಿಯ ಮತಗಳ ಸಂಖ್ಯೆ ಕಡಿಮೆಯಾಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next