Advertisement

ಸುತ್ತೂರಿ ಜಾತ್ರೆ ಅನ್ನ ಬ್ರಹ್ಮೋತ್ಸವ

11:53 AM Jan 19, 2018 | Team Udayavani |

ನಂಜನಗೂಡು: ಆದಿ ಜಗದ್ಗುರು ಶ್ರೀ ಶಿವರಾತ್ರಿ ಶಿವಯೋಗಿ ಅವರ ಜಾತ್ರಾ ಮಹೋತ್ಸವದ ಮಹಾ ದಾಸೋಹ ಶ್ರೀಗಳ ಅಗ್ನಿ ಪೂಜೆಯೊಂದಿಗೆ ಪ್ರಾರಂಭವಾದರೆ ಅನ್ನ ಬ್ರಹ್ಮೋತ್ವದಲ್ಲಿ ಮುಕ್ತಾಯ ಗೊಳ್ಳುತ್ತದೆ. ಇದು ಸಹಸ್ರಾರು ವರ್ಷಗಳಿಂದ ನಡೆದುಕೊಂಡು ಬಂದ ಪದ್ಧತಿಯಾಗಿದೆ.  

Advertisement

ಜಾತ್ರೆಯ ಅಂತಿಮ ದಿನ ಶ್ರೀ ಮಠದ ಪೀಠಾಧ್ಯಕ್ಷರೇ ಈ  ಸಂಪ್ರದಾಯವನ್ನು ನಡೆಸುವ ಪರಿಪಾಠವಿದೆ. ಈ ಧಾರ್ಮಿಕ ಕಾರ್ಯದಲ್ಲಿ ಪ್ರಕಾರ ಜಾತ್ರೆಯ ಕೊನೆಯ ದಿನದಂದು 2 ಕ್ವಿಂಟಾಲ್‌ ಅಕ್ಕಿಯ ಮೋಸರನ್ನ ತಲಾ 100 ಕೇಜಿಯ ಸಿಹಿ, ಹಾಗೂ ಖಾರಾ ಪೊಂಗಲ್‌ ಮತ್ತು 1 ಕ್ವಿಂಟಾಲ್‌ ದ್ರಾಕ್ಷಿ, ಗೊಡಂಬಿ, ಕಲ್ಲುಸಕ್ಕರೆ, ಬಾದಾಮಿ, ಉತ್ತುತ್ತೆಗಳನ್ನು ಆದಿ ಜಗದ್ಗುರು ಶಿವರಾತ್ರಿ ಶಿವಯೋಗಿಗಳು ಹಾಗೂ

ಲಿಂಗೈಖ್ಯ ಶಿವರಾತ್ರಿ ರಾಜೇಂದ್ರ ಸ್ವಾಮಿಗಳ ಗದ್ದುಗೆಯ ಮುಂದಿಟ್ಟು, ಜಾತ್ರೆ ಯಶಸ್ವಿಯಾಗಿದ್ದಕ್ಕಾಗಿ ವಿಧಿವತ್ತಾಗೆ ಪೂಜೆ ಮಾಡಿ ಪ್ರಾರ್ಥನೆ ಸಲ್ಲಿಸಿದ ನಂತರ ಈ ಎಲ್ಲ ಪದಾರ್ಥಗಳನ್ನು ಮಹಾ ದಾಸೋಹದ ಅನ್ನಪಾಯಸಗಳಿಗೆ ಸೇರಿಸಿ ಆಗಮಿಸಿದ ಭಕ್ತರೆಲ್ಲರಿಗೆ ನೀಡುವುದೇ ಅನ್ನಬ್ರಹ್ಮೋತ್ಸವ ಎನಿಸಿಕೊಳ್ಳುತ್ತದೆ.

ಈ ಅನ್ನ ಬ್ರಹ್ಮೋತ್ಸವ ಮುಕ್ತಾಯವಾದ ನಂತರವೇ ಶ್ರೀಗಳ ಉತ್ಸವ ಮೂರ್ತಿಯನ್ನು ಗದ್ದುಗೆಯಿಂದ ಸ್ಥಳಾಂತರಕ್ಕೆ ಅನುಮತಿ ಹಾಗೂ ಈ ಸಾಲಿನ ಜಾತ್ರೋತ್ಸವದ ಮುಕ್ತಾಯ ಎನ್ನುವ ಸಂಪ್ರದಾಯ ಈ ಜಾತ್ರೆಯದು.

Advertisement

Udayavani is now on Telegram. Click here to join our channel and stay updated with the latest news.

Next