Advertisement

ವೆಲ್ಲೂರು ಚುನಾವಣೆ ರದ್ದತಿ ಪ್ರಶ್ನಿಸಿ ಅಭ್ಯರ್ಥಿ ಷಣ್ಮುಗಂ ಮದ್ರಾಸ್‌ ಹೈಕೋರ್ಟಿಗೆ

12:48 PM Apr 18, 2019 | Sathish malya |

ಚೆನ್ನೈ : ದೇಶದ ಲೋಕಸಭಾ ಚುನಾವಣೆ ಇತಿಹಾಸದಲ್ಲೆ ಮೊದಲ ಬಾರಿಗೆಂಬಂತೆ ಇದೇ ಎಪ್ರಿಲ್‌ 18ರಂದು ನಡೆಯಬೇಕಿರುವ  ತಮಿಳು ನಾಡಿನ ವೆಲ್ಲೂರು ಲೋಕಸಭಾ ಚುನಾವಣೆಯನ್ನು ರದ್ದುಪಡಿಸಿರುವ ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ಎಐಎಡಿಎಂಕೆ ಮಿತ್ರ ಮತ್ತು ವೆಲ್ಲೂರು ಕ್ಷೇತ್ರದ ಅಭ್ಯರ್ಥಿ ಎ ಸಿ ಶಣ್ಮುಗಂ ಅವರು ಮದ್ರಾಸ್‌ ಹೈಕೋರ್ಟ್‌ ಮೆಟ್ಟಲೇರಿದ್ದಾರೆ.

Advertisement

ಕೋಟ್ಯಂತರ ನಗದು, ಮದ್ಯ, ಮಾದಕ ದ್ರವ್ಯ, ಬೆಲೆಬಾಳುವ ಲೋಹ ಮತ್ತು ಉಡುಗೊರೆಗಳನ್ನು ಜಫ್ತಿ ಮಾಡಲಾಗಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ವೆಲ್ಲೂರಿನ ಲೋಕಸಭಾ ಚುನಾವಣೆಯನ್ನು ರದ್ದುಪಡಿಸುವ ದಿಟ್ಟ ಕ್ರಮ ತೆಗೆದುಕೊಂಡಿದೆ.

ಹಾಗಿದ್ದರೂ ಇಲ್ಲಿನ ಮೂರು ವಿಧಾನಸಭಾ ಚುನವಾಣೆಗಳು ಈಗಾಗಲೇ ನಿಗದಿಯಾಗಿರುವಂತೆ ನಡೆಯಲಿವೆ ಎಂದು ಚುನಾವಣಾ ಆಯೋಗ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next