Advertisement

ನೆರೆ ಜಿಲ್ಲೆಗಳಲ್ಲಿ ವಾಹನ ಕಳ್ಳತನ ಮಾಡಿ, ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ ಖದೀಮ ಅಂದರ್

01:02 PM Feb 27, 2022 | Team Udayavani |

ಬೆಂಗಳೂರು: ನೆರೆ ಜಿಲ್ಲೆಗಳಲ್ಲಿ ವಾಹನ ಕಳ್ಳತನ ಮಾಡಿ ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಮಾಗಡಿ ರಸ್ತೆ ಪೊಲೀಸರು ಬಂಧಿಸಿದ್ದಾರೆ.

Advertisement

ಚಿಕ್ಕಮಗಳೂರು ಮೂಲದ ಸೈಯದ್‌ ರಫೀಕ್‌(26) ಬಂಧಿತ. ಆತನಿಂದ 7 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು 1 ಗೂಡ್ಸ್‌ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಗರದ ಶಂಕರ್‌ನಾಗ್‌ ಸರ್ಕಲ್‌ ಬಳಿಯ ಪ್ರೇಮ್‌ನಗರದಲ್ಲಿ ನಿವಾಸಿಯಾಗಿದ್ದು, ಮಂಡ್ಯ ಜಿಲ್ಲೆ ನಾಗಮಂಗಲ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರ ಅಪೆ ಗೂಡ್ಸ್‌ ವಾಹನ ಕಳ್ಳತನ ಮಾಡಿದ್ದ. ಅಲ್ಲಿನ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಆರೋಪಿ ಕಳವು ಮಾಡಿದ್ದ ಅಪೆ ಗೂಡ್ಸ್‌ ವಾಹನದಲ್ಲಿಅಲ್ಯೂಮಿನಿಯಂ ಪಾತ್ರೆಗಳನ್ನು ಮಾರಾಟ ಮಾಡುವ ಸೋಗಿನಲ್ಲಿ ವಿವಿಧ ಪ್ರದೇಶದ ಮನೆಗಳಿಗೆ ಹೋಗುತ್ತಿದ್ದ. ಆ ಸಂದರ್ಭದಲ್ಲಿ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಕಳ್ಳತನ ಮಾಡುತ್ತಿದ್ದ. ಕಾಟನ್‌ಪೇಟೆಯಲ್ಲಿ ಅಲ್ಯೂಮಿ ನಿಯಂ ಪಾತ್ರೆ ಮಾರಾಟ ಮಾಡಲು ಹೋದಾಗ ಮನೆ ಯೊಂದರ ದಂಪತಿ ಬೀಗ ಹಾಕಿಕೊಂಡು ಕೆಲಸಕ್ಕೆ ಹೋಗುವುದನ್ನು ಗಮನಿಸಿದ್ದ. ನಂತರ ಆ ಮನೆಗೆ ಹೋಗಿ ಬೀಗ ಮೀಟಿ ಆಭರಣ ಕಳವು ಮಾಡಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next