Advertisement

ವಸಾಯಿ ರೋಡ್‌ ಜಿಎಸ್‌ಬಿ ಬಾಲಾಜಿ ಸೇ. ಸ.: ಕಿಟ್‌ ವಿತರಣೆ

01:08 PM Aug 07, 2021 | Team Udayavani |

ಪುಣೆ: ವಸಾಯಿ ರೋಡ್‌ ಜಿಎಸ್‌ಬಿ ಬಾಲಾಜಿ ಸೇವಾ ಸಮಿತಿ ವತಿಯಿಂದ ಲಾಕ್‌ಡೌನ್‌ ಕಾರಣ ಆರ್ಥಿಕವಾಗಿ ತೊಂದರೆಗೀಡಾದ ಕುಟುಂಬಗಳಿಗೆ ದಿನಸಿ ಸಾಮಗ್ರಿಗಳ ಕಿಟ್‌ ವಿತರಣೆ ಕಾರ್ಯಕ್ರಮವನ್ನು ಇತ್ತೀಚೆಗೆ ಆಯೋಜಿಸಲಾಯಿತು.

Advertisement

ವಸಾಯಿ ರೋಡ್‌, ವಸಾಯಿ ಗಾಂವ್‌, ನಲಸೊಪರ ಪರಿಸರದ ಜಿಎಸ್‌ಬಿ ಸಮಾಜದ ಹಾಗೂ ವಸಾಯಿಯ ಕೆಲವು ಇತರ ಸಮಾ ಜದ ಒಟ್ಟು 40 ಕುಟುಂಬಗಳಿಗೆ ಸುಮಾರು 1,500 ರೂ. ಗಳ ಮೊತ್ತದ ದಿನಸಿ ಸಾಮಗ್ರಿಗಳ ಕಿಟ್‌ ಅನ್ನು ವಿತರಿಸಲಾಯಿತು. ಪರಿಸ್ಥಿತಿ ಮುಂದುವರಿದರೆ ಇನ್ನೂ ಎರಡು ಮೂರು ತಿಂಗಳು ಕೂಡ ಕಿಟ್‌ ಅನ್ನು ವಿತರಿಸುವ ಜವಾಬ್ದಾರಿಯನ್ನು ಸಮಿತಿ ವಹಿಸಿಕೊಂಡಿದೆ. ಈ ಮಹಾನ್‌ ಕಾರ್ಯವು ಸಮಿತಿಯ ಸದಸ್ಯರು ಹಾಗೂ ಹಿತೈಷಿಗಳ ನೆರವಿನಿಂದ ನಡೆಯಿತು.

ಇದನ್ನೂ ಓದಿ:ಮೇಕೆದಾಟು ವಿಚಾರದಲ್ಲಿ ಬಿಜೆಪಿ ಸಂಸದರು ಒಂದಾಗಿದ್ದೇವೆ: ಡಿ.ವಿ.ಸದಾನಂದ ಗೌಡ

ಸಮಿತಿಯ ಆಡಳಿತ ಮಂಡಳಿಯ ಸದಸ್ಯರು ಇತರ ಸದಸ್ಯರು, ಹಾಗೂ ಜಿಎಸ್‌ಬಿ ಸಮಾಜ ಸೇವಾ ಸಂಘ ಪಾರ್‌ನಾಕಾ ವಸಾಯಿ ಹಾಗೂ ಬಿಎಸ್‌ಬಿ ಪ್ರತಿಷ್ಠಾನ ನಲಸೊಪರ ಇದರ ಆಡಳಿತ ಮಂಡಳಿಯ ಸದಸ್ಯರು ಕಿಟ್‌ಗಳನ್ನು ವಿತರಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಬಾಲಾಜಿ ಸೇವಾ ಸಮಿತಿಯ ಆಡಳಿತ ಮಂಡಳಿಯ ಸದಸ್ಯರಾದ ದೇವೇಂದ್ರ ಭಕ್ತ, ಕೃಷ್ಣ ಕಾಮತ್‌, ಪುರುಷೋತ್ತಮ ಶೆಣೈ, ಲಕ್ಷ್ಮಣ್‌ ರಾವ್‌, ವಿನಾಯಕ ಪೈ, ಪುರುಷೋತ್ತಮ ಕುಡ್ವ, ಶ್ರೀನಿವಾಸ ಪಡಿಯಾರ್‌, ಶ್ರೀಧರ ಪ್ರಭು, ಶ್ರೀ ಸದಾಶಿವ ನಾಯಕ್‌, ರಾಮಚಂದ್ರ ಹೆಗ್ಡೆ, ಆರ್‌. ಜಿ. ಕಾಮತ್‌, ವಿ. ಕೆ. ಕಾಮತ್‌, ಮಂಜುನಾಥ ಎಸ್‌. ಪೈ, ಉದಯ್‌ ಕಾಮತ್‌, ಜಿಎಸ್‌ಬಿ ಸಮಾಜ ಸೇವಾ ಸಂಘ ವಸಾಯಿ ಇದರ ಪದಾಧಿಕಾರಿಗಳಾದ ಪ್ರಕಾಶ್‌ ಪೈ, ರಮೇಶ್‌ ಶೆಣೈ, ಮೋಹನ್‌ ಭಟ್‌, ವಿವೇಕ್‌ ಭಟ್‌, ಜಿಎಸ್‌ಜಿ ಪ್ರತಿಷ್ಠಾನ ನಲಸೊಪರ ಇದರ ಪದಾಧಿಕಾರಿಗಳಾದ ವಿ. ಡಿ. ಕುಡ್ವ, ಜಿ. ಎಸ್‌. ಕುಡ್ವ ಮೊಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next