Advertisement

Valmiki corporation scam: ನಾಗೇಂದ್ರ ಆಪ್ತನಿಂದಲೇ ವಿವಿಧ ಖಾತೆಗಳಿಗೆ ಹಣ ವರ್ಗಾವಣೆ!

12:52 AM Jul 17, 2024 | Team Udayavani |

ರಾಯಚೂರು: ವಾಲ್ಮೀಕಿ ನಿಗಮದ ಅಕ್ರಮ ಹಣ ವರ್ಗಾವಣೆ ಜಾಲ ಬಗೆದಷ್ಟು ಬಯಲಾಗುತ್ತಿದ್ದು, ಬಂಧಿತ ಮಾಜಿ ಸಚಿವ ನಾಗೇಂದ್ರ ಅವರ ಆಪ್ತನ ಬ್ಯಾಂಕ್‌ ಖಾತೆಯಿಂದ ಜಿಲ್ಲೆಯ ಹಲವರ ಖಾತೆಗಳಿಗೆ ಹಣ ವರ್ಗಾವಣೆಯಾಗಿರುವ ಅಂಶ ಬಯಲಾಗಿದೆ.

Advertisement

ಮಾಜಿ ಸಚಿವ ನಾಗೇಂದ್ರ ಆಪ್ತ ಸಹಾ ಯಕ ನೆಕ್ಕಂಟಿ ನಾಗರಾಜ್‌ ಖಾತೆ ಮೂಲಕವೇ ಇತರರ ಖಾತೆಗೆ ಹಣ ಜಮಾ ಗೊಂಡಿರುವ ದಾಖಲೆಗಳು ಬಯಲಾಗಿವೆ. ಜಿಲ್ಲೆಯ ಸಿಂಧನೂರಿನ ಬೂದಿಹಾಳ ಕ್ಯಾಂಪ್‌ ನಿವಾಸಿ ಕೋನಾ ವೆಂಕಟರಾವ್‌ ಹಾಗೂ ಆತನ ಇಬ್ಬರು ಪುತ್ರಿಯರಾದ ಲಕ್ಕಂಸಾನಿ ಲಕ್ಷ್ಮೀ, ರತ್ನಕುಮಾರಿ ಹಾಗೂ ಮೊಮ್ಮಗ ಎಲ್‌. ಸುನೀಲ ಅವರ ಖಾತೆಗೆ ಮಾ. 8ರಂದು ಈ ಹಣ ವರ್ಗಾವಣೆ ಮಾಡಲಾಗಿದೆ. ಬೂದಿ ಹಾಳ ಕ್ಯಾಂಪ್‌ನ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ಖಾತೆ ಗಳಿವೆ.

ನೆಕ್ಕಂಟಿ ನಾಗರಾಜ್‌ ಸಂಬಂಧಿ ಎನ್ನಲಾದ ವೆಂಕಟರಾವ್‌ ಅವರ ಇಡೀ ಕುಟುಂಬಕ್ಕೆ ಒಟ್ಟು 98 ಲಕ್ಷ ರೂ. ವರ್ಗಾವಣೆ ಮಾಡಲಾಗಿದೆ. ಕೋನಾ ವೆಂಕಟರಾವ್‌ ಖಾತೆಗೆ 12 ಲಕ್ಷ ರೂ., ಪುತ್ರಿಯರ ಖಾತೆಗೆ ತಲಾ 25 ಲಕ್ಷ ರೂ., ಮೊಮ್ಮಗನ ಖಾತೆಗೆ 36 ಲಕ್ಷ ಜಮಾವಣೆಗೊಂಡಿದೆ. ಕೋನಾ ವೆಂಕಟರಾವ್‌ ಕುಟುಂಬಕ್ಕೆ ಕಮಿಶನ್‌ ಆಸೆ ತೋರಿಸಿ ಹಣ ಜಮಾ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಈ ನಾಲ್ವರ ಖಾತೆಗಳನ್ನು ಜಪ್ತಿ ಮಾಡುವಂತೆ ಬೆಂಗಳೂರಿನ ಇ.ಡಿ. ಅ ಧಿಕಾರಿಗಳು ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಸಂಬಂಧವಿಲ್ಲ ಎಂದ ಕೋನಾ ವೆಂಕಟರಾವ್‌

ತನ್ನ ಹಾಗೂ ಮಕ್ಕಳ ಖಾತೆಗೆ ಹಣ ಬಂದಿರುವುದು ನಿಜ. ಹಣ ಬಿಡುಗಡೆ ಮಾಡಿಕೊಂಡಿದ್ದೇನೆ ಎಂದಿರುವ ಕೋನಾ ವೆಂಕಟರಾವ್‌ ಈಗ ಇದಕ್ಕೂ ತನಗೂ ಸಂಬಂಧವಿಲ್ಲ ಎನ್ನುತ್ತಿದ್ದಾರೆ. ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನೆಕ್ಕಂಟಿ ನಾಗರಾಜ್‌ ಯಾರೆಂದು ಗೊತ್ತಿಲ್ಲ. ನನಗೆ ಹಣ ಬಂದಿರುವುದು ಗೊತ್ತಿತ್ತು. ಅವರು ಹಾಕಿದ್ದಾರೆ, ನನ್ನ ಖಾತೆಗೆ ಬಂದಿದೆಯಷ್ಟೇ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next