Advertisement

ತಿರುವನಂತಪುರ –ಕಾಸರಗೋಡು ವಂದೇ ಭಾರತ್‌ ಎಕ್ಸ್‌ಪ್ರೆಸ್‌: ಎ. 25ರಂದು ಉದ್ಘಾಟನೆ

11:31 PM Apr 22, 2023 | Team Udayavani |

ಕಾಸರಗೋಡು: ಪ್ರತಿಷ್ಠಿತ ವಂದೇ ಭಾರತ್‌ ಎಕ್ಸ್‌ ಪ್ರಸ್‌ ರೈಲಿನ ತಿರುವನಂತಪುರ – ಕಾಸರಗೋಡು ನಡುವಣ ಸಂಚಾರಕ್ಕೆ ಎ. 25ರಂದು ಬೆಳಗ್ಗೆ 10.30ಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ತಿರುವನಂತಪುರದಲ್ಲಿ ಚಾಲನೆ ನೀಡುವರು.

Advertisement

ಕೇರಳ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌, ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, ಕೇಂದ್ರ ರೈಲ್ವೇ ಸಚಿವ ಅಶ್ವಿ‌ನಿ ವೈಷ್ಣವ್‌ ಹಾ ಇತರ ಗಣ್ಯರು ಭಾಗವಹಿಸುವರು.
ಅಂದು ಸಾಂಕೇತಿಕ ರೀತಿಯಲ್ಲಿ ಯಾನ ನಡೆಯಲಿದೆ. ಪ್ರಧಾನ ಮಂತ್ರಿಯವರು ಕೊಲ್ಲಂ ವರೆಗೆ ಪ್ರಯಾಣಿಸುವ ಸಾಧ್ಯತೆಯಿದೆ. ಆದರೆ ಈ ಬಗ್ಗೆ ಅಂತಿಮ ನಿರ್ಧಾರವಾಗಿಲ್ಲ.

ರೈಲು ವೇಳಾಪಟ್ಟಿ
ತಿರುವನಂತಪುರ ಸೆಂಟ್ರಲ್‌ ನಿಲ್ದಾಣದಿಂದ ಬೆಳಗ್ಗೆ 5.20ಕ್ಕೆ ಹೊರಟು ಮಧ್ಯಾಹ್ನ 1.25 ಕ್ಕೆ ಕಾಸರಗೋಡಿಗೆ ತಲುಪಲಿದೆ. ಅದೇ ರೈಲು ಮಧ್ಯಾಹ್ನ 2.30ಕ್ಕೆ ಕಾಸರಗೋನಿಂದ ಹೊರಟು ರಾತ್ರಿ 10.35ಕ್ಕೆ ತಿರುವನಂತಪುರ ಸೆಂಟ್ರಲ್‌ ರೈಲು ನಿಲ್ದಾಣಕ್ಕೆ ತಲುಪುವುದು. ಗುರುವಾರ ಹೊರತುಪಡಿಸಿ ವಾರದ 6 ದಿನಗಳಲ್ಲಿ ರೈಲು ಸಂಚಾರ ಇರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next