Advertisement

ಮೀನಿನ ಮೌಲ್ಯವರ್ಧಿತ ಚಿಪ್ಸ್‌, ಮಸಾಲೆ ಪದಾರ್ಥ ಲೋಕಾರ್ಪಣೆ

05:41 AM Jun 20, 2020 | Lakshmi GovindaRaj |

ಬೆಂಗಳೂರು: ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ ಮತ್ಸé ಬಂಧನ ಸಂಸ್ಥೆ ಸಹಯೋಗದಲ್ಲಿ ಹೊರತಂದಿರುವ ಮೀನಿನ ಮೌಲ್ಯವರ್ಧಿತ ಚಿಪ್ಸ್‌ ಮತ್ತು ಮೀನಿನ ಮಸಾಲೆ ಪದಾರ್ಥಗಳನ್ನು ಮುಖ್ಯಮಂತಿ ಯಡಿಯೂರಪ್ಪ  ಶುಕ್ರವಾರ ಲೋಕಾರ್ಪಣೆ ಮಾಡಿದರು. ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನೂತನ ಪದಾರ್ಥಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.

Advertisement

ನಿಗಮ ಮೀನುಗಾರರ ಮತ್ತು ಮೀನುಗಾರಿಕೆ ಕ್ಷೇತ್ರದ  ಅಭಿವೃದ್ಧಿಗಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಗುಣಮಟ್ಟ ನಿರ್ವಹಣೆ ದೃಷ್ಟಿಯಲ್ಲಿ, ಸಾಮಾ ಜಿಕ ಕಳಕಳಿಯೊಂದಿಗೆ, ತಾಜಾ ಮೀನು, ಘನೀಕೃತ ಮೀನು, ಮೌಲ್ಯವರ್ಧಿತ ಮೀನಿನ ಉತ್ಪನ್ನಗಳ ಮಾರಾಟ, ಶೀತಲ  ಸರಪಣಿ ಸದೃಢಗೊಳಿಸಿಕೊಂಡಿದೆ ಎಂದು ಹೇಳಿದರು.  ಮುಜರಾಯಿ, ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next