Advertisement

Vaishno Devi ಕ್ಷೇತ್ರದಲ್ಲಿ ಇನ್ನು ಮುಂದೆ ಭಕ್ತರಿಗೆ ಸಸಿ ಪ್ರಸಾದ: ಅಂಶುಲ್‌

12:11 AM Jun 06, 2024 | Team Udayavani |

ಜಮ್ಮು: ದೇವಸ್ಥಾನಗಳಲ್ಲಿ ಸಿಹಿ ಪದಾರ್ಥ ಇಲ್ಲವೇ ಅನ್ನವನ್ನು ಪ್ರಸಾದವಾಗಿ ನೀಡುವುದು ಸಾಮಾನ್ಯ. ಆದರೆ, ಜಮ್ಮುವಿನ ಪ್ರಸಿದ್ಧ ತೀರ್ಥಕ್ಷೇತ್ರ ವೈಷ್ಣೋ ದೇವಿ ಮಂದಿರದಲ್ಲಿ ಇನ್ನು ಮುಂದೆ ಭಕ್ತರಿಗೆ ಸಸಿಗಳನ್ನು ಪ್ರಸಾದವಾಗಿ ನೀಡಲಾಗುತ್ತದೆ.

Advertisement

ಈ ಕುರಿತು ತೀರ್ಥ ಕ್ಷೇತ್ರದ ಆಡಳಿತ ಮಂಡಳಿ ನಿರ್ಧರಿಸಿದ್ದು, ಮಂಡಳಿ ಆರಂಭಿಸಿದ ವೈಷ್ಣವಿ ವಾಟಿಕಾ ನರ್ಸರಿಯಿಂದ ಭಕ್ತರಿಗೆ ಸಸಿಗಳನ್ನು ಪ್ರಸಾದವಾಗಿ ನೀಡಲಾಗುತ್ತದೆ. ಜೂನ್‌ 5 ವಿಶ್ವ ಪರಿಸರ ದಿನದಂದು ಕಾತ್ರಾ ಬೇಸ್‌ ಕ್ಯಾಂಪ್‌ನಲ್ಲಿ ನರ್ಸರಿ ಉದ್ಘಾಟನೆಗೊಂಡಿದೆ.

ಈ ನೂತನ ನರ್ಸರಿಯಲ್ಲಿ 40 ವಿವಿಧ ತಳಿಯ ಸಸ್ಯಗಳಿದ್ದು, ಪರಿಸರ ಜಾಗೃತಿಗಾಗಿ ಭಕ್ತರಿಗೆ ಸಸಿಗಳನ್ನು ನೀಡುವ ಯೋಜನೆ ರೂಪಿಸಲಾಗಿದೆ ಎಂದು ಮಂಡಳಿಯ ಅಧಿಕಾರಿ ಅಂಶುಲ್‌ ಗಾರ್ಗ್‌ ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next