Advertisement

ಸೋಂದಾ, ಉಡುಪಿ: ವಾದಿರಾಜರ ಆರಾಧನೆ

12:34 PM Mar 16, 2017 | Harsha Rao |

ಉಡುಪಿ/ಶಿರಸಿ: ಶ್ರೀಕೃಷ್ಣಮಠದಲ್ಲಿ ಅನೇಕ ಬದಲಾವಣೆಗಳನ್ನು ತಂದ ಶ್ರೀ ವಾದಿರಾಜ ಗುರುಸಾರ್ವಭೌಮರ ಆರಾಧನೋತ್ಸವ ಬುಧವಾರ ಅವರ ಮೂಲ ವೃಂದಾವನವಿರುವ ಶಿರಸಿ ಸಮೀಪದ ಸೋಂದಾ ಕ್ಷೇತ್ರ ಮತ್ತು ಉಡುಪಿ ಶ್ರೀಕೃಷ್ಣ ಮಠದಲ್ಲಿ ಜರಗಿತು.

Advertisement

ಶ್ರೀಕೃಷ್ಣ ಮಠದಲ್ಲಿ ನಡೆದ ಸಮಾರಂಭದಲ್ಲಿ ವಾದಿರಾಜರ ಭಾವಚಿತ್ರದ ಮೆರವಣಿಗೆ ರಥಬೀದಿಯಲ್ಲಿ ನಡೆ ಯಿತು. ಬಳಿಕ ವಿದ್ವತ್‌ ಸಭೆಯಲ್ಲಿ ಪರ್ಯಾಯ ಶ್ರೀ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು, ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಶ್ರೀ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಪಾಲ್ಗೊಂಡು ವಾದಿರಾಜರ ಪ್ರತಿಭಾ ಸಂಪನ್ನತೆ, ತಪಸ್ಸು, ಗ್ರಂಥ ರಚನೆ ಮೊದಲಾದ ವಿಷಯಗಳ ಮೇಲೆ ಬೆಳಕು ಚೆಲ್ಲಿದರು.

ಸೋಂದಾ ಕ್ಷೇತ್ರದಲ್ಲಿ ಶ್ರೀಸೋದೆ ಮಠದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಮೂಲ ವೃಂದಾವನಕ್ಕೆ ಪೂಜೆ ಸಲ್ಲಿಸಿದರು. ಬಳಿಕ ವಾದಿರಾಜ ರಿಗೆ ದೊರಕಿದ್ದ ಮುತ್ತಿನಕಿರೀಟ, ಛತ್ರಚಾಮರ, ಅವರು ಕೊನೆಯಲ್ಲಿ ಬಿಸುಟ ಕಾವಿಶಾಟಿಯನ್ನು ಭಕ್ತರು ವೀಕ್ಷಿಸಿದರು. 

ಉದ್ಯಾವರದ ಶ್ರೀ ವರಾಹತೀರ್ಥ ಸಂಸ್ಥಾನದಲ್ಲಿ ಪಂಚವೃಂದಾವನಕ್ಕೆ ಅರ್ಚಕ ಅನಂತ ಆಚಾರ್ಯ ವಿಶೇಷ ಪೂಜೆ ಸಲ್ಲಿಸಿದರು. ವಾದಿರಾಜರ ಮೃತ್ತಿಕಾ ವೃಂದಾವನವಿರುವ ಸ್ಥಳಗಳಲ್ಲಿ ವಿಶೇಷ ಪೂಜೆ ಸಂಪನ್ನ ಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next