Advertisement

ಅಪಘಾತ: ವಡನ್‌ಬೈಲ್ ಧರ್ಮದರ್ಶಿ ವೀರರಾಜ ಜೈನ್ ಪಾರು; ಸಹೋದರ ಸಾವು

04:12 PM Sep 22, 2022 | Team Udayavani |

ಸಾಗರ: ತಾಲೂಕಿನ ಜೋಗದ ಶಿರೂರು ಕೆರೆ ಸೇತುವೆ ಮೇಲೆ ಕೆಎಸ್‌ಆರ್‌ಟಿಸಿ ಬಸ್ ಮತ್ತು ಮಾರುತಿ ಓಮಿನಿ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಓರ್ವ ವ್ಯಕ್ತಿ ಮೃತಪಟ್ಟ ಘಟನೆ ಗುರುವಾರ ನಡೆದಿದೆ.

Advertisement

ಶ್ರೀಕ್ಷೇತ್ರ ವಡನ್‌ಬೈಲ್ ಧರ್ಮದರ್ಶಿ ಎಚ್.ಎಂ.ವೀರರಾಜ ಜೈನ್ ಮತ್ತು ಅವರ ಸಹೋದರ ಎಚ್.ಎಂ. ದೇವಯ್ಯ ಅವರು ಕಾರ್ಗಲ್‌ನ ಸಹಕಾರಿ ಸಂಸ್ಥೆಯೊಂದರ ಸರ್ವಸದಸ್ಯರ ಸಭೆಗೆ ಬರುತ್ತಿದ್ದಾಗ ಈ ಅಪಘಾತ ಸಂಭವಿಸಿದ್ದು ದೇವಯ್ಯ (70) ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

ವೀರರಾಜ ಜೈನ್ ಅವರ ಕಾಲು ಮುರಿದಿದೆ ಎನ್ನಲಾಗಿದ್ದು, ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕರೆದೊಯ್ಯಲಾಗಿದೆ. ಅಪಘಾತದಲ್ಲಿ ಓಮಿನಿ ಸಂಪೂರ್ಣ ನಜ್ಜುಗುಜ್ಜಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next