Advertisement

ವಡಾಲ: ಶ್ರೀ ರಾಮಮಂದಿರದಲ್ಲಿ ಆಷಾಢ ಏಕಾದಶಿ ಆಚರಣೆ

03:39 PM Jul 06, 2017 | |

ಮುಂಬಯಿ: ವಡಾಲದ ಶ್ರೀ ರಾಮಮಂದಿರದಲ್ಲಿ ಆಷಾಢ ಏಕಾದಶಿ ಆಚರಣೆಯು ಜು 4ರಂದು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಿತು. ಧಾರ್ಮಿಕ ಕಾರ್ಯಕ್ರಮವಾಗಿ ಮುಂಜಾನೆಯಿಂದ ಶ್ರೀ ರಾಮದೇವರು, ವಿಠಲ ರುಖುಮಾಯಿ ದೇವರಿಗೆ ವಿಶೇಷ ಪೂಜೆ, ಆರತಿ ನಡೆಯಿತು.

Advertisement

ಆನಂತರ ಏಕಾಹ ಭಜನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಗರದ ವಿರಾರ್‌, ವಾಶಿ, ಬದ್ಲಾಪುರ ಹಾಗೂ ಇನ್ನಿತರೆಡೆಗಳಿಂದ ಆಗಮಿಸಿದ ಭಜನ ಮಂಡಳಿಗಳು, ಸಮಾಜದ ಸಂಘ-ಸಂಸ್ಥೆಗಳ ಭಜನ ಮಂಡಳಿಗಳು ಏಕಾಹ ಭಜನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವು. ಶ್ರೀ ಬಾಲಾಜಿ ಭಜನ ಮಂಡಳಿ ವಸಾಯಿ ಅವರಿಂದ ರಾತ್ರಿ 8ರಿಂದ 10ರವರೆಗೆ ಭಜನ ಕಾರ್ಯಕ್ರಮ ನಡೆಯಿತು.

ಕೊನೆಯಲ್ಲಿ ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು. ಜಿಎಸ್‌ಬಿ ಸಮಾಜ ಬಾಂಧವರು, ಭಕ್ತಾಭಿಮಾನಿಗಳು, ಸ್ಥಳೀಯ ಉದ್ಯಮಿಗಳು, ಸಮಾಜ ಸೇವಕರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ರಾಮಮಂದಿರದ ಆಡಳಿತ ಮಂಡಳಿ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next