Advertisement

Reality Shows: ಮಕ್ಕಳ ಬೆಳವಣಿಗೆಯಲ್ಲಿ ರಿಯಾಲಿಟಿ ಶೋಗಳ ಪಾತ್ರ

04:14 PM Jul 19, 2024 | Team Udayavani |

ಮಕ್ಕಳ ಬೆಳವಣಿಗೆಯ ಮೇಲೆ ರಿಯಾಲಿಟಿ ಶೋಗಳು ಅನುಕೂಲಕರವಾದ ಪರಿಣಾಮ ಬೀರುವುದಕ್ಕಿಂತ ಅನನುಕೂಲ ಪರಿಣಾಮ ಬೀರುವುದೇ ಹೆಚ್ಚು. ಈ ಶೋಗಳು ಮಕ್ಕಳ ಪ್ರತಿಭೆಯನ್ನು ಅನಾವರಣ ಮಾಡಲು ಉತ್ತಮ ವೇದಿಕೆ ಒದಗಿಸಿವೆ.ಆದರೆ ಅವಲೋಕಿಸಿದರೆ ಮಕ್ಕಳ ಮೇಲೆ ಇದರ ಸಾಧಕಗಳಿಗಿಂತ ಬಾಧಕಗಳೇ ಹೆಚ್ಚು.

Advertisement

ಹದಿನಾಲ್ಕು ವರ್ಷದ ಒಳಗಿನ ಮಕ್ಕಳು, ದೈಹಿಕ ಸ್ವರೂಪದಲ್ಲಿ ಅಥವಾ ಮಾನಸಿಕ ಸ್ವರೂಪ ದಲ್ಲಿ ದುಡಿದರೆ ಅದು ಬಾಲಾಪರಾಧವೇ ಸರಿ. ಅದೇ ರೀತಿ ಪ್ರತಿಭೆಯ ಹೆಸರಿನಲ್ಲಿ ಮಕ್ಕಳಿಗೆ ಮಾನಸಿಕವಾಗಿ ಒತ್ತಡ ಹಾಕುವುದು ಸರಿಯಲ್ಲ. ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಆಟವಾಡಿಸುತ್ತಾ ಪಾಠವನ್ನು ಕಲಿಸಬೇಕು, ಅದನ್ನು ಬಿಟ್ಟು ಪ್ರತಿಭೆ ಅನಾವರಣ ಹೆಸರಿನಲ್ಲಿ ಚಿಕ್ಕ ವಯಸ್ಸಿನಿಂದಲೇ ಹಲವು ತರಗತಿಗಳಿಗೆ ಸೇರಿಸಿ ಅವರ ಬಾಲ್ಯವನ್ನು ಕಸಿದುಕೊಳ್ಳುವುದು ಸರಿಯಲ್ಲ.

ಮಕ್ಕಳ ಪ್ರತಿಭೆಯನ್ನು ಪರಿಚಯಸುತ್ತೇವೆ ಎಂದು ಇತ್ತೀಚಿನ ದಿನಗಳಲ್ಲಿ ಕಿರುತೆರೆಯ ಬಹುತೇಕ ವಾಹಿನಿಗಳಲ್ಲಿ ಪ್ರತ್ಯೇಕವಾಗಿ ಮಕ್ಕಳಿಗಾಗಿಯೇ ರಿಯಾಲಿಟಿ ಶೋಗಳನ್ನು ಆಯೋಜಿಸುತ್ತಿದೆ. ಈ ರೀತಿ ರಿಯಾಲಿಟಿ ಶೋಗಳ ನಟನೆಯಲ್ಲಿ ತೊಡಗಿಕೊಳ್ಳುವ ಮಕ್ಕಳಲ್ಲಿ ಉತ್ತಮ ಪ್ರದರ್ಶನ ನೀಡುವಂತೆ ಒತ್ತಡ ಹೆಚ್ಚಿರುತ್ತದೆ. ಇದು ಅವರ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಯ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ.

ಈ ವಯಸ್ಸಿನಲ್ಲಿ ಮಕ್ಕಳು ಸೋಲು – ಗೆಲುವನ್ನು ಒಂದೇ ರೀತಿಯಲ್ಲಿ ಸ್ವೀಕರಿಸುವಷ್ಟು ಪ್ರಭುದ್ಧರಾಗಿರುವುದಿಲ್ಲ. ಆಯ್ಕೆ ಆಗದ ಮಗುವಿಗೆ ಹತಾಶೆ ಕಾಡುತ್ತದೆ. ಕೆಲವು ಬಾರಿ ಬಹುಮಾನದ ಆಸೆಗೆ ಪೋಷಕರೇ ನೀನು ಗೆಲ್ಲಲೇ ಬೇಕು ಎಂದು ಒತ್ತಡ ಹಾಕುತ್ತಾರೆ. ಮಕ್ಕಳು ಚಿಕ್ಕವಯಸ್ಸಿನಲ್ಲಿಯೇ ಹಣ, ಪ್ರಚಾರದ ಮೋಹಕ್ಕೆ ಸಿಕ್ಕಿಬಿಡುತ್ತಿವೆ. ಒಂದು ರೀತಿಯ ಅವರಲ್ಲಿ ಐಡೆಂಟಿಟಿ ಕ್ರೆ„ಸಿಸ್‌ ಶುರುವಾಗುತ್ತದೆ.

ಹಾಸ್ಯವೆಂದು ಕೆಲವೊಂದು ಶೋಗಳಲ್ಲಿ ಮಕ್ಕಳ ಬಳಿ ವಯಸ್ಸಿಗೆ ಮೀರಿದ ಮಾತುಗಳನ್ನು ಆಡಿಸಲಾಗುತ್ತದೆ. ಇದನ್ನು ನೋಡಿದ ಇತರ ಮಕ್ಕಳು ಅದನ್ನೇ ಕಲಿಯುತ್ತವೆ. ಅವುಗಳ ಆಟ ಪಾಠ ನೋಟ ಎಲ್ಲದರ ಮೇಲೆ ಇದರ ಪರಿಣಾಮ ಬೀರುತ್ತದೆ. ವಾಹಿನಿಗಳಲ್ಲಿ ತಮಾಷೆಗೆ ಎಂದು ಮಕ್ಕಳ ಪೋಷಕರನ್ನು ಅಪಹಸ್ಯ ಮಾಡಿದರೆ, ಈ ಮಕ್ಕಳು ತಮ್ಮ ಪೋಷಕರಿಗೆ ಗೌರವವನ್ನು ನೀಡುವುದಿಲ್ಲ.

Advertisement

ಮಕ್ಕಳು ಹೆತ್ತವರ ವಿರುದ್ಧ ಮಾತನಾಡುವುದೇ ಹಾಸ್ಯವೆಂದು ತಿಳಿದುಬಿಡುತ್ತಾರೆ. ನಿರೂಪಕರು ಮಕ್ಕಳೊಂದಿಗೆ ಅವರ ತಂದೆ ತಾಯಿಯ ನಡುವಿನ ತೀರಾ ವೈಯುಕ್ತಿಕ ಪ್ರಶ್ನೆಗಳನ್ನು, ಅಸಂಬದ್ಧ ಪ್ರಶ್ನೆಗಳನ್ನು ತಮ್ಮ ವಾಹಿನಿಯ ಟಿಆರ್‌ಪಿ ಗಳಿಸುವ ದೃಷ್ಟಿಯಿಂದ ಕೇಳುವುದು ಮಗುವಿನ ಯೋಚನಾ ಲಹರಿಯ ದಿಕ್ಕನ್ನು ತಪ್ಪಿಸಿದ ಹಾಗಾಗುತ್ತದೆ. ಮಕ್ಕಳನ್ನು ಮಕ್ಕಳ ಹಾಗೆಯೇ ಇರಲು ಬಿಡಬೇಕು. ಅದನ್ನು ತಮ್ಮ ವಾಹಿನಿಯ ಅಭಿಲಾಷೆಗೆ ತಿದ್ದುವುದು ಹಣದಾಸೆಗೆ ಬಳಸಿಕೊಳ್ಳುವುದು ಸಲ್ಲದು.

ಜಗತ್ತಿನಲ್ಲಿರುವ ಪ್ರತಿಯೊಂದು ಮಗುವಿಗೂ ಒಂದಲ್ಲಾ ಒಂದು ಪ್ರತಿಭೆ ಇರುತ್ತದೆ. ಪ್ರತಿಭೆ ನೈಜವಾಗಿದ್ದರೆ ಅದು ತನ್ನಿಂದ ತಾನೇ ಹೊರಬರುತ್ತದೆ. ಶಾಲಾ ಮಟ್ಟದಲ್ಲಿ ಹಲವಾರು ಸಾಂಸ್ಕೃತಿಕ ಸ್ಪರ್ಧೆ, ಪ್ರತಿಭಾ ಕಾರಂಜಿ ನಡೆಯುತ್ತವೆ. ಆದರೆ ಆ ಪ್ರತಿಭೆಯನ್ನು ಮುಂದಿಟ್ಟುಕೊಂಡು ಮನೋರಂಜನೆಯ ಹೆಸರಿನಲ್ಲಿ ಮಕ್ಕಳನ್ನು ದುಡಿಸಿಕೊಳ್ಳುವುದು ತರವಲ್ಲ. ಮಕ್ಕಳು ಬೆಳೆಯುತ್ತಾ ಹೋದಂತೆ ಅವರನ್ನು ಗುರುತಿಸುವುದು ಕಡಿಮೆಯಾಗುತ್ತದೆ. ಅವಕಾಶಗಳು ಕ್ಷೀಣಿಸುತ್ತದೆ.  ಅವಕಾಶ ಸಿಗದೆ ಖನ್ನತೆಗೆ ಒಳಗಾಗುವುದೂ ಇದೆ. ಬಾಲ ಕಲಾವಿದರಾಗಿ ಮೆರೆದ ಅದೆಷ್ಟೋ ಮಕ್ಕಳು ತಮ್ಮ ವಯಸ್ಸಿಗೆ ಬಂದಾಗ ಹಾಗೂ ಜೀವನದಲ್ಲಿ ಏನೂ ಆಗದೆ ಹತಾಶರಾದ

ಹಲವು ಕಥೆಗಳು ನಮಗೆ ಸಿಗುತ್ತವೆ. ಹೀಗೆ ವಾಹಿನಿಗಳು ಪ್ರತಿಭೆಯನ್ನು ಬಳಸಿಕೊಂಡು ಮಕ್ಕಳ ಬಾಲ್ಯವನ್ನು ಮುಗ್ಧತೆ ಯನ್ನು ಹಾಳು ಮಾಡುವಂತಹ ಕೆಲಸಗಳಿಗೆ ಕೈ ಹಾಕ ಬಾರದು. ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿ ಸೋಣ ಅದನ್ನು ವ್ಯಾಪಾರಿಕರಣ ಗೊಳಿಸುವುದು ಸರಿಯಲ್ಲ.

ಚೇತನ ಭಾರ್ಗವ

ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next