Advertisement
ಇಂತಹ ಭಾರತ ಯಾವತ್ತಿಗೂ ಯಾರ ಮೇಲೂ ಯುದ್ಧ ಮಾಡಲು ಹೋಗಲಿಲ್ಲ. ಯಾರನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡು ಆಳ್ವಿಕೆ ಮಾಡಲು ಬಯಸಲಿಲ್ಲ. ಆದರೆ ಯಾವಾಗ ಭಾರತ ತನ್ನ ಮೇಲೆ ಆಕ್ರಮಣಗಳು ಆದವೋ ಆಗ ಸುಮ್ಮನೆ ಇರಲೂ ಇಲ್ಲ. ತನ್ನ ಅಜೇಯ ನಾಗಾಲೋಟವನ್ನು ಸಾರುತ್ತಲೇ ಬಂದಿದೆ. ಭಾರತ ಜಗತ್ತಿನ ಅತ್ಯಂತ ಸಮೃದ್ಧವಾದ ದೇಶ.
Related Articles
Advertisement
ರಾಮ್ ಪ್ರಸಾದ್ ಬಿಸ್ಮಿಲ್ ಗಲ್ಲಿಗೇರುವ ಹಿಂದಿನ ದಿನ ಅವನ ತಾಯಿ ಅವನನ್ನು ನೋಡಲು ಬರುತ್ತಾಳೆ. ತಾಯಿಯನ್ನು ಕಂಡು ಗಳ ಗಳನೆ ಅತ್ತ ರಾಮನನ್ನು ನೋಡಿ ಆ ತಾಯಿ ಆಡಿದ ಮಾತು ಛೇ! ನನ್ನ ಮಗ ವೀರ ಧೀರ ಎಂದು ಭಾವಿಸಿದ್ದೆ. ಅವನನ್ನು ಕಂಡು ಇಡೀಯ ಬ್ರಿಟಿಷ್ ಸರಕಾರ ಹೆದರುತ್ತದೆ. ಅವನು ಯಾವುದಕ್ಕೂ ಭಯ ಪಡುವುದಿಲ್ಲ ಎಂದು ಅಂದುಕೊಂಡಿದ್ದೆ. ಆದರೆ ನನ್ನ ಮಗ ಸಾವಿಗೆ ಹೆದರುತ್ತಾನೆ ಎಂದು ತಿಳಿದಿರಲಿಲ್ಲ ಎಂದು. ಅದಕ್ಕೆ ರಾಮ್ ಪ್ರಸಾದ್ ನೀಡಿದ ಉತ್ತರ ಅಮ್ಮ ನಾನು ಸಾವಿಗೆ ಹೆದರುತ್ತಿಲ್ಲ ಕೊನೆಯ ಕಾಲದಲ್ಲಿ ನಿನ್ನ ಸೇವೆ ಮಾಡಲು ಸಾದ್ಯವಾಗಲಿಲ್ಲ ಎಂದು ಅಳುತ್ತಿದ್ದೇನೆ. ಆಗ ರಾಮನ ತಾಯಿ ಅಯ್ಯೋ ನೀನು ನಿನ್ನ ತಾಯಿಯ ಸೇವೆ ಮಾಡದೇ ಹೋದರೆ ಏನಾಯ್ತು ಭಾರತ ಮಾತೆಯ ಸೇವೆ ಮಾಡಿದ್ದಿ ಚಿಂತೆ ಮಾಡಬೇಡ ಎಂದು ಹೇಳುತ್ತಾಳೆ.
ಇಲ್ಲಿದ್ದದ್ದು ಭಾರತಮಾತೆಯಲ್ಲಿ ಸರ್ವ ಸಮರ್ಪಿತ ಭಾವ. ಹುಡುಗ ಮದನ್ ಲಾಲ್ ಧೀಂಗ್ರಾ ನೀನು ದೊಡ್ಡ ತಾಯಿ ನಾನು ದಡ್ಡ ಮಗ ನಿನಗಾಗಿ ನಾನು ನನ್ನ ಪ್ರಾಣವನ್ನಲ್ಲದೆ ಮತ್ತೇನನ್ನು ತಾನೆ ಕೊಡಬಲ್ಲೆ ಎಂದು ಹೇಳುವಾಗ ತನ್ನ ಎಲ್ಲ ಸರ್ವಸ್ವಕ್ಕಿಂತಲೂ ಭಾರತ ಮಾತೆಯೇ ಪರಮ ಸಂಪತ್ತು ಎಂದು ಭಾವಿಸಿದ್ದು ತಿಳಿಯುತ್ತದೆ.
ಸಾವಿರಾರು ಹೋರಾಟಗಾರರ ನೆತ್ತರ ಹರಿಸಿ ನೀಡಿದ ಭಿಕ್ಷೆಯೇ ಇಂದು ನಾವು ಅನುಭವಿಸುವ ಸ್ವಾತಂತ್ರ್ಯ. ಭಾರತ ಮಾತೆಗೆ ಯಾವಾಗೆಲ್ಲಾ ಕಷ್ಟ ಬರುತ್ತದೋ ಆಗೆಲ್ಲಾ ರತ್ನಗಳು ಜನ್ಮ ತಾಳುತ್ತಲೇ ಇರುತ್ತದೆ. ಅದು ಚಂದ್ರಗುಪ್ತ ಮೌರ್ಯನಿಂದ ಹಿಡಿದು ವಿವೇಕಾನಂದರ ತನಕ. ಸ್ವಾತಂತ್ರ್ಯ ಸಿಕ್ಕಿದೆ ಇನ್ನು ರತ್ನಗಳಾಗಬೇಕಾದದ್ದು ಆ ಸ್ವಾತಂತ್ರವನ್ನು ಉಳಿಸಿಕೊಳ್ಳಲು.ಭಾರತ ಖಂಡದ ಹಿತವೇ
ನನ್ನ ಹಿತ ಎಂದು
ಭಾರತ ಮಾತೆಯ ಮತವೇ
ನನ್ನ ಮತ ಎಂದು
ಭಾರತಾಂಬೆಯ ಸುತರೆ
ಸೋದರರು ಎಂದು
ಭಾರತಾಂಬೆಯ ಮುಕ್ತಿ
ಮುಕ್ತಿ ನನಗದೆಂದು ಎನ್ನುವ ಕುವೆಂಪು ಅವರ ಮಾತು ಸರ್ವ ಕಾಲಕ್ಕೂ ಸ್ಪೂರ್ತಿಯಾಗಬೇಕು. ಭಾರತ ಮಾತೆಗಾಗಿ ರತ್ನಗಳಾಗಬೇಕು. ಲತೇಶ್ ಸಾಂತ
ಅಂತಿಮ ಬಿ.ಎ, ಪತ್ರಿಕೋದ್ಯಮ ವಿಭಾಗ
ವಿ.ವಿ ಕಾಲೇಜು ಮಂಗಳೂರು.