Advertisement

Utsav 2023: ಮಾಹೆ ವಿ.ವಿ…. “ಉತ್ಸವ-23′ಸಂಪನ್ನ

11:46 PM Apr 19, 2023 | Team Udayavani |

ಮಣಿಪಾಲ: ಮಾಹೆ ವಿಶ್ವ ವಿದ್ಯಾನಿಲಯದ ಸಾಂಸ್ಕೃತಿಕ ಸಮನ್ವಯ ಸಮಿತಿ ವತಿಯಿಂದ ವಾರ್ಷಿಕ ಸಾಂಸ್ಕೃತಿಕ ಉತ್ಸವ “ಉತ್ಸವ-23′ ಕೆಎಂಸಿ ಗ್ರೀನ್‌ನಲ್ಲಿ ನಡೆಯಿತು.

Advertisement

ಮಾಹೆ ಟ್ರಸ್ಟ್‌ನ ಟ್ರಸ್ಟಿ ವಸಂತಿ ಆರ್‌. ಪೈ ಉದ್ಘಾಟಿಸಿದರು. ಮಾಹೆ ವಿ.ವಿ. ಸಹಕುಲಾಧಿಪತಿ ಡಾ| ಎಚ್‌.ಎಸ್‌. ಬÇÉಾಳ್‌, ಕುಲಪತಿ ಲೆ|ಜ| ಡಾ| ಎಂ.ಡಿ. ವೆಂಕಟೇಶ್‌, ವಿದ್ಯಾರ್ಥಿ ವ್ಯವಹಾರಗಳ ನಿರ್ದೇಶಕಿ ಡಾ| ಗೀತಾ ಮಯ್ಯ, ಸಿಸಿಸಿ ಮಾಹೆಯ ಅಧ್ಯಕ್ಷೆ ಡಾ| ಶೋಭಾ ಕಾಮತ್‌, ಡಾ| ಸಂಬಿತ್‌, ಸಿಸಿಸಿ ಮಾಹೆಯ ಕಾರ್ಯದರ್ಶಿ ದಾಸ್‌ ಉಪಸ್ಥಿತರಿದ್ದರು.

ಉತ್ಸವವು ಮಾಹೆ ವಿ.ವಿ.ಗೆ ಅತಿದೊಡ್ಡ ಮತ್ತು ಮಹತ್ವವಾದ ಸಾಂಸ್ಕೃತಿಕ ಉತ್ಸವವಾಗಿದೆ. ವಿ.ವಿ.ಯ ಪ್ರತಿಭಾವಂತ ಮನಸ್ಸುಗಳಿಗೆ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ವೇದಿಕೆಯಾಗಿದ್ದು ಈ ಬಾರಿ ದುಬಾೖ, ಜಮ್‌ಶೆಡ್‌ಪುರ, ಜೈಪುರ, ಸಿಕ್ಕಿಂ, ಬೆಂಗಳೂರು ಸೇರಿದಂತೆ ಮಣಿಪಾಲದ ಹೊರಗಿನ 5 ಕ್ಯಾಂಪಸ್‌ಗಳ ಗುಂಪುಗಳು ಭಾಗವಹಿಸಿದ್ದವು.

ಸಮಾರೋಪ ಸಮಾರಂಭದಲ್ಲಿ ಮಾಹೆ ವಿ.ವಿ. ಸಹ ಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್, ಮಾಹೆ ವಿ.ವಿ. ಕುಲಪತಿ ಲೆ|ಜ| ಡಾ| ಎಂ.ಡಿ. ವೆಂಕಟೇಶ್‌ ಉಪಸ್ಥಿತರಿದ್ದರು.
ಮಾಹೆ ವಿ.ವಿ. ಸಿಸಿಸಿ ಅಧ್ಯಕ್ಷೆ ಡಾ| ಶೋಭಾ ಯು. ಕಾಮತ್‌ ಸ್ವಾಗತಿಸಿ, ಸಿಸಿಸಿ ಕಾರ್ಯದರ್ಶಿ ಡಾ| ಸಂಬಿತ್‌ ವಂದಿಸಿದರು.

ಪ್ರಶಸ್ತಿ ಪ್ರದಾನ, ಸಮಾರೋಪ
“ಉತ್ಸವ-23′ ಸಮಾರೋಪ ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಪ್ರಶಸ್ತಿ ಪ್ರದಾನ ನಡೆಯಿತು. ಮಂಗಳೂರಿನ ಕೆಎಂಸಿ ಸಮಗ್ರ ಚಾಂಪಿಯನ್‌ ಪ್ರಶಸ್ತಿ ಪಡೆಯಿತು. ಮಂಗಳೂರಿನ ಮಣಿಪಾಲ ಕಾಲೇಜ್‌ ಆಫ್ ಡೆಂಟಲ್‌ ಸೈನ್ಸಸ್‌ ಮತ್ತು ಕೆಎಂಸಿ ಮೊದಲ ರನ್ನರ್‌ ಅಪ್‌ ಆದರೆ, ಮಣಿಪಾಲ ತೃತೀಯ ಸ್ಥಾನ ಪಡೆಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next