Advertisement
ರಾಜನ ಲೋಕಸಂಚಾರದ ವಿಚಾರ ತಿಳಿದ ಪ್ರಜೆಗಳು ತುಂಬಾ ಸಂತಸಗೊಂಡರು. ರಾಜನನ್ನು ಎದುರುಗೊಳ್ಳಲು ಪ್ರಜೆಗಳು ಉತ್ಸಾಹಿತರಾದರು. ಅಂದುಕೊಂಡಂತೆಯೇ ರಾಜನನ್ನು ಅವನ ಪ್ರಜೆಗಳು ಬಾರಿ ಸಂಭ್ರಮ ಸಡಗರದಿಂದ ಸ್ವಾಗತಿಸಿದರು. ರಾಜ್ಯದ ಉದ್ದಗಲಕ್ಕೂ ಸಂಚರಿಸಿದ ರಾಜ ತನ್ನ ಜನರು ಸುಖ ಸಂತೋಷವಾಗಿರುವುದನ್ನು ಕಂಡು ಸಂತುಷ್ಟನಾದ. ರಾಜ್ಯ ಸಂಪದ್ಭರಿತವಾಗಿರುವುದನ್ನು ಕಂಡು ರಾಜನ ಮನಸ್ಸು ನಲಿಯಿತು.
Related Articles
Advertisement
ಮತ್ತು ರಾಜ್ಯದ ಬೊಕ್ಕಸವೆಲ್ಲ ರಸ್ತೆ ತಯಾರಿಗೆ ಸುರಿದುಬಿಟ್ಟರೆ ಇನ್ನು ಕೆಲವೇ ವರ್ಷಗಳಲ್ಲಿ ಸುಭಿಕ್ಷವಾಗಿರುವ ರಾಜ್ಯ ದರಿದ್ರವಾಗುವುದು ಖಂಡಿತ ಎನ್ನುವುದು ಮಂತ್ರಿಯ ಚಿಂತೆಗೆ ಕಾರಣವಾಗಿತ್ತು. ಅದಕ್ಕೇ ಹೇಗಾದರೂ ಮಾಡಿ ರಾಜನ ಮನವೊಲಿಸಬೇಕೆಂದು ನಿರ್ಧರಿಸಿದ. ಆದರೆ ರಾಜ ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿರಲಿಲ್ಲ. ಹೀಗಾಗಿ ಮಂತ್ರಿ ಒಂದು ಉಪಾಯವನ್ನು ಹೂಡಿದ.
ಒಂದು ದಿನ ರಾಜ ಮತ್ತು ಮಂತ್ರಿ ವಾಯುವಿಹಾರಕ್ಕೆ ಹೊರಟಿದ್ದರು. ಅದೇ ಸಮಯಕ್ಕೆ ಜೋರಾಗಿ ಮಳೆ ಬಂದಿತು. ಮಂತ್ರಿ ಸೇವಕರಲ್ಲಿ ರಾಜ ಹೋಗುವ ದಾರಿಯಿಡೀ ಚಪ್ಪರವನ್ನು ತಯಾರಿಸುವಂತೆ ಆಜ್ಞಾಪಿಸಿದ. ರಾಜ ನಗುತ್ತಾ “ಅಲ್ಲಾ ಮಂತ್ರಿವರ್ಯರೇ ನಿಮ್ಮನ್ನು ಬುದ್ಧಿವಂತನೆಂದು ಅಂದುಕೊಂಡಿದ್ದೆ. ನಾವು ಹೋಗುವ ದಾರಿಯಲ್ಲಿ ಚಪ್ಪರ ಕಟ್ಟುವುದು ವೃಥಾ ಖರ್ಚಲ್ಲವೆ? ಊರಿಗೇ ಚಪ್ಪರ ಕಟ್ಟುವುದಕ್ಕೆ ಬದಲಾಗಿ ನಾವು ಚತ್ರಿಯನ್ನು ಹಿಡಿದುಕೊಂಡು ಹೋಗಬಹುದಲ್ಲವೆ?’ ಎಂದು ಹೇಳಿದ.
ಮಂತ್ರಿಗೂ ಇದೇ ಬೇಕಿತ್ತು. “ರಾಜ ಸರಿಯಾಗಿ ಹೇಳಿದಿರಿ ನೀವು. ಆದೇ ರೀತಿ ರಾಜ್ಯವಿಡೀ ಚರ್ಮದ ರಸ್ತೆಯನ್ನು ಮಾಡಿಸುವುದಕ್ಕಿಂತ ಚರ್ಮದ ಪಾದರಕ್ಷೆಯನ್ನು ಧರಿಸಿ ಓಡಾಡುವುದು ಒಳ್ಳೆಯದಲ್ಲವೆ?’ ಎಂದು ಪ್ರಶ್ನಿಸಿದ. ರಾಜನಿಗೆ ಮಂತ್ರಿಯ ಉಪಾಯ ಗೊತ್ತಾಯಿತು. ಮಂತ್ರಿಯ ಜಾಣತನಕ್ಕೆ ತಲೆದೂಗಿದ. ಕೂಡಲೆ ತಜ್ಞರ ತಂಡಕ್ಕೆ ಚರ್ಮದ ರಸ್ತೆಗೆ ಬದಲಾಗಿ ಪಾದರಕ್ಷೆಗಳನ್ನು ತಯಾರಿಸಿ ಪ್ರಜೆಗಳಿಗೆ ಹಂಚುವಂತೆ ಆಜ್ಞಾಪಿಸಿದ.
* ಸುಮನ್ ದುಬೈ