Advertisement

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

06:56 PM Apr 25, 2024 | Team Udayavani |

ಬಳ್ಳಾರಿ: ಇಲ್ಲಿನ ಬಳ್ಫಾರಿ ನಗರಾಭಿವೃದ್ಧಿ ಪ್ರಾಧಿಕಾರದ(BUDA) ಕಚೇರಿ ಮೇಲೆ ದಾಳಿ‌ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಲಕ್ಷ ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ಆರು ಮಂದಿ ಭ್ರಷ್ಟ ಅಧಿಕಾರಿಗಳನ್ನು ಬಲೆಗೆ ಬೀಳಿಸಿದ್ದಾರೆ.

Advertisement

ಆಯುಕ್ತರಿಂದ ಹಿಡಿದು ಕೇಸ್ ವರ್ಕರ್ ವರೆಗೂ ಅಧಿಕಾರಿಗಳು ಲಂಚ ಪಡೆದಿದ್ದರು.ಒಂದೇ ಪ್ರಕರಣದಲ್ಲಿ ಆರು ಮಂದಿ ಅಧಿಕಾರಿಗಳನ್ನ ಲೋಕಾಯುಕ್ತ‌ ಪೊಲೀಸರು ಬಂಧಿಸಿದ್ದಾರೆ.

ಬುಡ ಕಮಿಷನರ್ ರಮೇಶ್ ವಟಗಲ್, ಬುಡ ಟೌನ್ ಪ್ಲಾನಿಂಗ್ ಮೆಂಬರ್ ಕಲ್ಲಿನಾಥ್, ಅಸಿಸ್ಟೆಂಟ್ ಟೌನ್ ಪ್ಲಾನರ್ ಯಶಸ್ವಿನಿ, ಬುಡ ಮ್ಯಾನೇಜರ್ ನಾರಾಯಣ, ಕೇಸ್ ವರ್ಕರ್ ಶಂಕರ್, ಜೂನಿಯರ್ ಇಂಜಿನಿಯರ್ ಕಾಜಾ ಹುಸೇನ್ ಅವರನ್ನು ಬಂಧಿಸಲಾಗಿದೆ.

1. ಬುಡ ಕಮಿಷನರ್ ರಮೇಶ್ ವಟಗಲ್- 5 ಲಕ್ಷ ಲಂಚ ಪಡೆಯುವಾಗಲೇ ಲೋಕಾಯುಕ್ತ ಬಲೆಗೆ.
2. ಇನ್ನು 6 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬುಡ ಟೌನ್ ಪ್ಲಾನಿಂಗ್ ಮೆಂಬರ್ ಕಲ್ಲಿನಾಥ್ ಲೋಕಾಯುಕ್ತದಿಂದ ಅರೆಸ್ಟ್.
3. 3 ಲಕ್ಷ ಲಂಚದ ಬೇಡಿಕೆ ಇಟ್ಟಿದ್ದ ಅಸಿಸ್ಟೆಂಟ್ ಟೌನ್ ಪ್ಲಾನರ್ ಯಶಸ್ವಿನಿ ಬಂಧನ.
4. ಪೋನ್ ಪೇ ಮೂಲಕ 10 ಸಾವಿರ ಲಂಚ ಪಡೆದಿದ್ದ ಬುಡ ಮ್ಯಾನೇಜರ್ ನಾರಾಯಣ ಬಂಧನ.
5. 20 ಸಾವಿರ ಲಂಚ ಪಡೆದಿದ್ದ ಕೇಸ್ ವರ್ಕರ್ ಶಂಕರ್ ಬಂಧನ.
6. ಪೋನ್ ಪೇ ಮೂಲಕ 20 ಸಾವಿರ ಲಂಚ ಪಡೆದಿದ್ದ ಬುಡ ಜೂನಿಯರ್ ಇಂಜಿನಿಯರ್ ಕಾಜಾ ಹುಸೇನ್ ಬಂಧನ.

Advertisement

Udayavani is now on Telegram. Click here to join our channel and stay updated with the latest news.

Next