Advertisement

ಉಪಹಾರ್ ಅಗ್ನಿ ದುರಂತ ಕೇಸ್; ಅನ್ಸಾಲ್ ಗೆ 1 ವರ್ಷ ಜೈಲು: ಸುಪ್ರೀಂ

03:09 PM Feb 09, 2017 | Sharanya Alva |

ನವದೆಹಲಿ:ಉಪಹಾರ್ ಚಿತ್ರಮಂದಿರ ಅಗ್ನಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ 1997 ಜೂನ್ 13ರಂದು ದೋಷಿಯಾಗಿದ್ದ ಗೋಪಾಲ್ ಅನ್ಸಾಲ್ ಒಂದು ವರ್ಷ ಜೈಲುಶಿಕ್ಷೆ ಅನುಭವಿಸಬೇಕೆಂದು ಗುರುವಾರ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಅನ್ಸಾಲ್ ಈಗಾಗಲೇ 4 ತಿಂಗಳು ಜೈಲುಶಿಕ್ಷೆ ಅನುಭವಿಸಿದ್ದ.

Advertisement

59 ಜನರ ಸಾವಿಗೆ ಕಾರಣವಾಗಿದ್ದ ಈ ಪ್ರಕರಣದಲ್ಲಿ ಗೋಪಾಲ್ ಅನ್ಸಾಲ್ ನಾಲ್ಕು ವಾರಗಳೊಳಗೆ ಶರಣಾಗಿ ಉಳಿದಿರುವ ಜೈಲುಶಿಕ್ಷೆಯನ್ನು ಅನುಭವಿಸಬೇಕೆಂದು ಸುಪ್ರೀಂಕೋರ್ಟ್ ಪೀಠ ಬಹುಮತದ(2:1) ತೀರ್ಪನ್ನು ನೀಡಿದೆ.

ಉಪಹಾರ್ ಚಿತ್ರಮಂದಿರದ ಅಗ್ನಿದುರಂತ ಘಟನೆಯಲ್ಲಿ ಸುಶೀಲ್ ಅನ್ಸಾಲ್ ಕೂಡಾ ದೋಷಿಯಾಗಿದ್ದು, ಈಗಾಗಲೇ 4 ತಿಂಗಳು ಜೈಲುಶಿಕ್ಷೆ ಅನುಭವಿಸಿದ್ದು, ವಯೋಮಾನದ ದೃಷ್ಟಿಯಿಂದ ಬಾಕಿ ಉಳಿದಿರುವ ಜೈಲುಶಿಕ್ಷೆಯಿಂದ ವಿನಾಯ್ತಿ ನೀಡಲಾಗಿದೆ.

2015ರ ಆಗಸ್ಟ್ 19 ರಂದು ತೀರ್ಪು ಪ್ರಕಟಿಸಿದ್ದ ಸುಪ್ರೀಂ ಕೋರ್ಟ್ ಸುಶೀಲ್ ಮತ್ತು ಗೋಪಾಲ್​ಗೆ 30 ಕೋಟಿ ರೂ. ಪರಿಹಾರವನ್ನು ಮೃತರ ಕುಟುಂಬಸ್ಥರಿಗೆ ನೀಡಬೇಕು ಎಂದು ತೀರ್ಪು ನೀಡಿತ್ತು. 3 ತಿಂಗಳೊಳಗೆ ಪರಿಹಾರ ನೀಡಲು ವಿಫಲರಾದರೆ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು ಎಂದೂ ಸಹ ತಿಳಿಸಿತ್ತು. ಕೋರ್ಟ್ ತೀರ್ಪಿನ ನಂತರ ಅನ್ಸಾಲ್ ಸಹೋದರರು ಪರಿಹಾರದ ಮೊತ್ತವನ್ನು ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಪಾವತಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next