Advertisement

ಬಿಜೆಪಿ ಪರದೆಯ ಹಿಂದೆ ಸಿಗರೇಟ್‌ ಸೇದುವ ಸೀತೆ ಪಾತ್ರಧಾರಿಯಂತೆ !

10:02 AM Apr 26, 2019 | Vishnu Das |

ದರ್ಬಂಗಾ : ಆರ್‌ಎಲ್‌ಎಸ್‌ಪಿ ನಾಯಕ ಉಪೇಂದ್ರ ಕುಶ್ವಾಹಾ ಅವರು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಬಿಜೆಪಿ ರಾಮ್‌ಲೀಲಾದಲ್ಲಿ ಪರದೆಯ ಹಿಂದೆ ಕುಳಿತು ಸಿಗರೇಟ್‌ ಸೇದುವ ಸೀತೆ ಪಾತ್ರಧಾರಿಯಂತೆ ಎಂದು ಲೇವಡಿ ಮಾಡಿದ್ದಾರೆ.

Advertisement

ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದಮಾಜಿ ಕೇಂದ್ರ ಸಚಿವ ಕುಶ್‌ವಾಹಾ , ರಾಮ್‌ಲೀಲಾದಲ್ಲಿ ಪರದೆ ಎತ್ತಿದಾಗ ಸೀತೆಯಂತೆ ವೇಷತೊಟ್ಟು ವ್ಯಕ್ತಿಯೊಬ್ಬ ಬರುತ್ತಾನೆ. ಜನರು ರಾಮ್‌ಲೀಲಾ ನೋಡಿ ಗೌರವ ಪೂರ್ವಕವಾಗಿ ಅವರತಲೆ ಬಾಗುತ್ತಾರೆ. ಆದರೆ ಪರದೆಯ ಹಿಂದೆ ಹೋಗಿ ನೋಡಿದರೆ ಅದೇ ಸೀತೆ ಸಿಗರೇಟ್‌ ಸೇದುತ್ತಿರುವುದನ್ನು ನೋಡಬೇಕಾಗುತ್ತದೆ.ಇದು ಬಿಜೆಪಿಯ ಮುಖ ಎಂದು ತುಲನೆ ಮಾಡಿದ್ದಾರೆ.

ಕುಶ್‌ವಾಹಾ ಅವರು ಎನ್‌ಡಿಎ ಮೈತ್ರಿಕೂಟದಲ್ಲಿದ್ದು ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಸಚಿವರಾಗಿದ್ದರು. ಕೆಲ ತಿಂಗಳ ಹಿಂದೆ ಮೋದಿ ವಿರುದ್ಧ ಸಿಡಿದೆದ್ದು ಎನ್‌ಡಿಎ ತೊರೆದು ಮಹಾ ಘಟಬಂಧನ್‌ ಸೇರಿಕೊಂಡಿರುವ ಅವರು ಬಿಜೆಪಿ ವಿರುದ್ಧ ಬಿಹಾರದಲ್ಲಿ ಭಾರಿ ಪ್ರಚಾರ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next