Advertisement

ಉತ್ತರ ಪ್ರದೇಶ ರಸ್ತೆ ಅಪಘಾತ: 10ಕ್ಕೇರಿದ ಮೃತರ ಸಂಖ್ಯೆ

03:34 PM Sep 20, 2017 | udayavani editorial |

ಬದೌನ್‌ : ಕಕ್ರಾಲಾ ರಸ್ತೆಯಲ್ಲಿ ನಿನ್ನೆ ಸಂಜೆ ನಡೆದಿದ್ದ ಭೀಕರ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ಇಂದು ಹತ್ತಕ್ಕೇರಿದೆ. 

Advertisement

ನಿನ್ನೆ ಮಂಗಳವಾರ ಸಂಜೆ ಎಸ್‌ಯುವಿ ವಾಹನ ಮರಕ್ಕೆ ಢಿಕ್ಕಿಯಾದಾಗ ಇಬ್ಬರು ಮಕ್ಕಳು, ಎಸ್‌ಯುವಿ ಚಾಲಕ ಸೇರಿದಂತೆ ಒಟ್ಟು 7 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದರು. 

ಈ ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮೂವರು ಇಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫ‌ಲಕಾರಿಯಾಗದೆ ಕೊನೆಯುಸಿರೆಳೆದರು. 

ಮೃತರಲ್ಲಿ ಮೂವರನ್ನು ಪೊಲೀಸರು ಗುರುತಿಸಿದ್ದಾರೆ. ಅವರೆಂದರೆ ಮಿರಾಜ್‌ 34, ನಸ್‌ರೀನ್‌ 24 ಮತ್ತು ಸೋನಿ 2. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪೊಲೀಸ್‌ ತನಿಖೆ ನಡೆದಿದೆ.

ಎಸ್‌ಯುವಿ ಚಾಲಕನು ವಾಹನದ ಮೇಲೆ ನಿಯಂತ್ರಣ ಕಳೆದುಕೊಂಡದ್ದೇ ಅದು ಮರಕ್ಕೆ ಢಿಕ್ಕಿ ಹೊಡೆಯಲು ಕಾರಣವಿದ್ದಿರಬಹುದು ಎಂದು ಎಸ್‌ಎಸ್‌ಪಿ ಚಂದ್ರ ಪ್ರಕಾಶ್‌ ತಿಳಿಸಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next