Advertisement

ಕ್ಷುಲ್ಲಕ ಜಗಳದ ಪರಾಕಾಷ್ಠೆ: ಪತ್ನಿ, ಪುತ್ರನನ್ನು ಇರಿದು ಕೊಂದ ಪತಿ

12:15 PM Nov 08, 2018 | udayavani editorial |

ಬಂದಾ, ಉತ್ತರ ಪ್ರದೇಶ : ವ್ಯಕ್ತಿಯೋರ್ವ ಕ್ಷುಲ್ಲಕ ಕಾರಣಕ್ಕೆ  ತನ್ನ  23ರ ಹರೆಯದ ಪತ್ನಿ ಮತ್ತು ಎರಡು ವರ್ಷ ಪ್ರಾಯದ ಮಗನನ್ನು ಇರಿದು ಕೊಂದ ಘಟನೆ ಗರ್ಗ್‌ ಪುರ ಗ್ರಾಮದಲ್ಲಿ ನಡೆದಿರುವುದು ವರದಿಯಾಗಿದೆ. 

Advertisement

ಕೊಲೆಗಡುಕ ಪತಿ ರೋಹಿತ್‌ ಯಾವುದೋ ಕ್ಷುಲ್ಲಕ ಕಾರಣಕ್ಕೆ  ಉಂಟಾದ ಮಾತಿನ ಜಗಳದ ಪರಾಕಾಷ್ಠೆಯಲ್ಲಿ  ಪತ್ನಿ ನೀಲಂ ಮತ್ತು ಎರಡು ವರ್ಷದ ಗಂಡು ಮಗುವನ್ನು ಹರಿತವಾದ ಆಯುಧದಿಂದ ಇರಿದು ಕೊಂದ ಎಂದು ಎಎಸ್‌ಪಿ ಎಲ್‌ ಬಿ ಕುಮಾರ್‌ ಪಾಲ್‌ ತಿಳಿಸಿದ್ದಾರೆ.

ಕೊಲೆಗಡುಕ ಪತಿ ರೋಹಿತ್‌ನ ಇರಿತದಿಂದ ತೀವ್ರ ಗಾಯಗೊಂಡ ಇಬ್ಬರನ್ನೂ ಒಡನೆಯೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಅಲ್ಲಿ ಮೃತಪಟ್ಟರು. ಹತ್ಯೆಗೆ ಬಳಸಲಾದ ಆಯುಧವನ್ನು ಪೊಲೀಸರು ವಶಪಡಿಸಿಕೊಂಡಿದ್ದು ಕೃತ್ಯದ ಬಳಿಕ ತಲೆ ಮರೆಸಿಕೊಂಡಿರುವ ಆರೋಪಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next