Advertisement

ಕೇಂದ್ರ ಸಚಿವ ಸದಾನಂದಗೌಡ ನನಗಿಂತ ಸೀನಿಯರ್ ಅಲ್ಲ- ಯತ್ನಾಳ ತಿರುಗೇಟು

09:45 PM Dec 25, 2020 | mahesh |

ವಿಜಯಪುರ: ನಾನು ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಮಂತ್ರಿ ಆಗಿದ್ದು, ಸದಾನಂದಗೌಡ ಅವರು ಈಗ ಸಚಿವರಾಗಿದ್ದಾರೆ. ಹೀಗಾಗಿ ಯಾರು ಸೀನೀಯರ್ ಎಂದು ನೀವೇ ನಿರ್ಧರಿಸಿ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ‌ ಅವರು ಕೇಂದ್ರ ಸಚಿವ ಸದಾನಂದಗೌಡ ಅವರಿಗೆ ತಿರುಗೇಟು ನೀಡಿದ್ದಾರೆ.

Advertisement

ಸಂಪುಟ ವಿಸ್ತರಣೆ, ಪುನಾರಚನೆ ಕುರಿತ ತಮ್ಮ ಹೇಳಿಕೆ ಸಚಿವ ಸದಾನಂದ ಗೌಡ ಅವರು ಯತ್ನಾಳ ಬಿಜೆಪಿ ರಾಜ್ಯಾಧ್ಯಕ್ಷರಲ್ಲ, ಪಕ್ಷದ ಸಾಮಾನ್ಯ ಶಾಸಕ ಮಾತ್ರ. ಅವರಿಂದ ಏನು ಮಾಡಲು ಸಾಧ್ಯ ಎಂಬ ಹೇಳಿಕೆಗೆ ತಿರುಗೇಟು ನೀಡಿದ ಅವರು, ಕೇಂದ್ರ ಸಚಿವ ಸದಾನಂದಗೌಡರು ಸರಿಯಾಗೇ ಹೇಳಿದ್ದಾರೆ, ಪ್ರಧಾನಿ ನರೇಂದ್ರ ಮೋದಿ ಅವರೇ ತಾವು ಪ್ರಧಾನಿ ಅಲ್ಲ, ಸಾಮಾನ್ಯ ಜನ ಸೇವಕ ಎಂದಿದ್ದಾರೆ. ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತನೇ. ಸದಾನಂದಗೌಡ ಒಳ್ಳೆಯ ಸಲಹೆ ಕೊಟ್ಟಿದ್ದಾರೆ ಎಂದು ಕುಟುಕಿದ್ದಾರೆ.

ನಾನು ಸಾಮಾನ್ಯ ಶಾಸಕ, ಸೇವಕ. ಹೀಗಾಗಿ ಸದಾನಂದಗೌಡ ಅವರಿಗೆ ಅಭಿನಂದನೆಗಳು. ಇಷ್ಟಕ್ಕೂ ಎಲ್ಲಿಯೂ ನನ್ನನ್ನು ನಾನು ರಾಷ್ಟ್ರೀಯ ನಾಯಕನೆಂದು ಹೇಳಿಕೊಂಡಿಲ್ಲ. ನಾನು ಓರ್ವ ಸಾಮಾನ್ಯ ಶಾಸಕ ಅವರು ಹೇಳಿದ್ದು ನೂರಕ್ಕೆ ನೂರು ಸತ್ಯ ಹಾಗೂ ಸೂಕ್ತವಾಗಿದೆ. ಅವರು ಇಷ್ಟೋಂದು ಜ್ಞಾನ ಕೊಟ್ಟಿದ್ದಕ್ಕೆ ಹೃದಯ ಪೂರ್ವಕ ಕೃತಜ್ಞತೆಗಳು. ಹಾದೀ‌ಬೀದಿಯಲ್ಲಿ ಪತ್ರಕರ್ತರು ಕೇಳುತ್ತಾರೆ.‌ ಪತ್ರಕರ್ತರು ಎಲ್ಲಿ ಪ್ರಶ್ನೆ ಕೇಳುತ್ತಾರೋ ಅಲ್ಲೇ ಉತ್ತರಿಸಿದ್ದೇನೆ. ‌ನಾನು ಸ್ಚಯಂ ಘೋಷಿತ ರಾಷ್ಟೀಯ, ರಾಜ್ಯ, ಜಿಲ್ಲಾ ನಾಯಕನಲ್ಲ. ಜನರಿಂದ ಜನರಿಗಾಗಿ ಆಯ್ಕೆಯಾಗಿದ್ದೇನೆ. ಸದಾನಂದಗೌಡ ಮುಖ್ಯಮಂತ್ರಿ ಆಗಿದ್ದವರು, ಕೇಂದ್ರ ರೇಲ್ವೇ ಖಾತೆ ಸಚಿವರಾಗಿದ್ದವರು‌. ಈಗ ರಸಗೊಬ್ಬರ ಸಚಿವರಾಗಿ ಯಶಸ್ವಿಯಾಗಿದ್ದಾರೆ ಎಂದು ವ್ಯಂಗ್ಯವಾಡಿದರು.

ಅವರು ನಾನು ಒಂದೇ ಕಾಲದಲ್ಲಿ ಶಾಸಕರಾಗಿ ಆಯ್ಕೆಯಾದವರೇ, ನನಗಿಂತ ಅವರೇನೂ ಹಿರಿಯರಲ್ಲ.ಅವರು ರಾಜ್ಯಾಧ್ಯಕ್ಷರಾಗಿದ್ದ ವೇಳೆಯೇ ನನ್ನನ್ನು ಪಕ್ಷದಿಂದ 6 ವರ್ಷ ಅಮಾನತ್ತು ಮಾಡಿದ್ದರು. ಅವರಿಗೆ ನಮ್ನ ಮೇಲೆ ಪ್ರೀತಿ ಜಾಸ್ತಿ ಇದೆ ಎಂದು ಕುಟುಕಿದರು.

Advertisement

Udayavani is now on Telegram. Click here to join our channel and stay updated with the latest news.

Next