Advertisement

ಮೇ 24 ಪ್ರಧಾನಿ ಮೋದಿ ಸಚಿವ ಸಂಪುಟ ಸಭೆ; 16ನೇ ಲೋಕಸಭೆ ವಿಸರ್ಜನೆಗೆ ಶಿಫಾರಸು

04:33 PM May 24, 2019 | Sathish malya |

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರ ಕೇಂದ್ರ ಸಚಿವ ಸಂಪುಟ ಇದೇ ಶುಕ್ರವಾರ ಮೇ 24ರಂದು ಸಂಜೆ ಸಭೆ ಸೇರಿ 16ನೇ ಲೋಕಸಭೆಯ ವಿಸರ್ಜನೆಗೆ ಶಿಫಾರಸು ಮಾಡಲಿದೆ.

Advertisement

ಕೇಂದ್ರದಲ್ಲಿ ಎನ್‌ಡಿಎ ಮರಳಿ ಅಧಿಕಾರಕ್ಕೆ ಬರುವುದನ್ನು ಬಹುತೇಕ ಖಾತರಿಪಡಿಸಿರುವ ಇಂದು ಗುರುವಾರದ ಮತ ಎಣಿಕೆಯ ಪ್ರಕ್ರಿಯೆ ಸಂಪೂರ್ಣಗೊಳ್ಳುವ ಒಂದು ದಿನದ ತರುವಾಯ ಕೇಂದ್ರ ಸಚಿವ ಸಂಪುಟ ಶುಕ್ರವಾರದಂದು ಸಭೆ ಸೇರಲಿದೆ.

16ನೇ ಲೋಕಸಭೆಯನ್ನು ವಿಸರ್ಜಿಸುವ ಶಿಫಾರಸಿನ ಠರಾವನ್ನು ಸಂಪುಟವು ಕೈಗೊಂಡು ಅದನ್ನು ರಾಷ್ಟ್ರಪತಿ ರಾಮ ನಾಥ್‌ ಕೋವಿಂದ್‌ ಅವರಿಗೆ ಸಲ್ಲಿಸಲಿದೆ. 16ನೇ ಲೋಕಸಭೆಯ ಅವಧಿಯು ಜೂನ್‌ 3ಕ್ಕೆ ಕೊನೆಗೊಳ್ಳುತ್ತದೆ.

ಅದೇ ದಿನ (ಜೂನ್‌ 3) 17ನೇ ಲೋಕಸಭೆಯನ್ನು ರೂಪಿಸಲಾಗುತ್ತದೆ. ಲೋಕಸಭೆಗೆ ಹೊಸದಾಗಿ ಚುನಾಯಿತರಾಗಿರುವವರ ಪಟ್ಟಿಯನ್ನು ಮೂವರು ಚುನಾವಣಾ ಆಯುಕ್ತರು ರಾಷ್ಟ್ರಪತಿಗೆ ಸಲ್ಲಿಸಿದ ಬಳಿಕದ ಕೆಲವೇ ದಿನಗಳಲ್ಲಿ 17ನೇ ಲೋಕಸಭೆ ರೂಪುಗೊಳ್ಳುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next