Advertisement

ರಾಹುಲ್ ಪ್ರಮಾಣ ಮಾಡಿಸಿಕೊಂಡಷ್ಟು ದುರದೃಷ್ಟಕರ ಸಂಗತಿ ಬೇರೊಂದಿಲ್ಲ: ಸ್ಮೃತಿ ಇರಾನಿ

05:19 PM Feb 06, 2022 | Team Udayavani |

ಪಣಜಿ: ಅಮೇಠಿಯಲ್ಲಿ ಸೋತಿರುವ ನಾಯಕರೊಬ್ಬರು ಗೋವಾಕ್ಕೆ ಬಂದು ತಮ್ಮ ಅಭ್ಯರ್ಥಿಗಳಿಂದ ಆಯ್ಕೆಯಾದ ನಂತರ ಬೇರೆ ಪಕ್ಷಕ್ಕೆ ಹೋಗುವುದಿಲ್ಲ ಎಂದು ಪ್ರಮಾಣ ಮಾಡಿಸಿಕೊಂಡಷ್ಟು ದುರದೃಷ್ಟಕರ ಸಂಗತಿ ಬೇರೊಂದಿಲ್ಲ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ರವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಟೀಕಾಪ್ರಹಾರ ನಡೆಸಿದರು.

Advertisement

ಗೋವಾದ ಕಾಣಕೋಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ತವಡಕರ್ ರವರ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ಕೋವಿಡ್ ಲಸಿಕೆ ನೀಡುವಾಗ, ವಿದ್ಯುತ್ ಮತ್ತು ಸಾರ್ವಜನಿಕ ಕಲ್ಯಾಣ ಯೋಜನೆಗಳ ಪ್ರಯೋಜನಗಳನ್ನು ಜನರಿಗೆ ಒದಗಿಸುವಾಗ ಬಿಜೆಪಿ ಎಂದಿಗೂ ಜಾತಿ,ಧರ್ಮ ಪರಿಗಣಿಸುವುದಿಲ್ಲ ಎಂದರು.

ಈ ಸಂದರ್ಭದಲ್ಲಿ ಕರ್ನಾಟಕದ ಮಾಜಿ ಶಾಸಕ ಸುನೀಲ್ ಹೆಗಡೆ, ಶಾಸಕ ಗಣಪತ್ ಗಾಯಕವಾಡ್, ಕಾಣಕೋಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ್ ತವಡಕರ್, ಉಪಸ್ಥಿತರಿದ್ದರು.

ಸ್ಮೃತಿ ಇರಾನಿ ಅವರು ಪ್ರಚಾರ ಸ್ಥಳಕ್ಕೆ ಹೋಗುತ್ತಿದ್ದಾಗ ಅಪಘಾತಕ್ಕೊಳಗಾದವರಿಗೆ ಸಹಾಯ ಮಾಡಿ ಆದರ್ಶ ಮೆರೆದರು.

ಸ್ಮೃತಿ ಇರಾನಿ ಅವರು ಶನಿವಾರ ವೆಲಿಮ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸಾವಿಯೊ ರಾಡ್ರಿಗಸ್‌ ಪರವಾಗಿ ಮನೆ ಮನೆಗೆ ಪ್ರಚಾರ ಮಾಡಿದರು. ಗೃಹ ಸಚಿವ ಅಮಿತ್ ಶಾ ಅವರು ಗೋವಾಕ್ಕೆ ಭೇಟಿ ನೀಡುವ ಎರಡು ದಿನಗಳ ಮೊದಲು ಇರಾನಿ ಪ್ರಚಾರ ನಡೆಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next