Advertisement

ವಾರಾಣಸಿ: ನಿರ್ಮಾಣ ಹಂತದಲ್ಲಿದ್ದ ಫ್ಲೈ ಓವರ್‌ ಕುಸಿದು 12 ಸಾವು

07:10 PM May 15, 2018 | udayavani editorial |

ಲಕ್ನೋ : ಪ್ರಧಾನಿ ನರೇಂದ್ರ ಮೋದಿ ಅವರ ಲೋಕಸಭಾ ಕ್ಷೇತ್ರವಾಗಿರುವ ವಾರಾಣಸಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಫ್ಲೈ ಓವರ್‌ ಕುಸಿದು ಬಿದ್ದು 12 ಜನರು ದಾರುಣವಾಗಿ ಮೃತಪಟ್ಟಿದ್ದು ಇತರ ಅನೇಕರು ಅವಶೇಷಗಳಡಿ ಸಿಲುಕಿರುವುದಾಗಿ ವರದಿಯಾಗಿದೆ. 

Advertisement

ವಾರಾಣಸಿಯ ಕಂಟೋನ್ಮೆಂಟ್‌ ಪ್ರದೇಶದ ರೈಲು ನಿಲ್ದಾಣ ಸಮೀಪದ ಫ್ಲೈ ಓವರ್‌ನ ಒಂದು ಭಾಗ ಕುಸಿದು ಬಿದ್ದಾಗ ಅನೇಕ ಮಂದಿ ಕಾರ್ಮಿಕರು ಅದರಡಿಗೆ ಸಿಲುಕಿದರು. 

ಘಟನೆ ನಡೆದ ಕೂಡಲೇ ಮೂರು ಜೆಸಿಬಿಗಳನ್ನು  ಬಳಸಿಕೊಂಡು ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಳ್ಳಲಾಯಿತು. ರಕ್ಷಣಾ ಕಾರ್ಯಾಚರಣೆಗೆ ದೊಡ್ಡ ಗಾತ್ರದ ವಾಹನಗಳನ್ನು ಬಳಸಿಕೊಳ್ಳಲು ಅನುವಾಗುವಂತೆ ಫ್ಲೈ ಓವರ್‌ ಸಮೀಪವೇ ಇದ್ದ ಆವರಣ ಗೋಡೆಯನ್ನು ಉರುಳಿಸಲಾಯಿತು. 

ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಈ ದುರ್ಘ‌ಟನೆ ಬಗ್ಗೆ ತೀವ್ರ ಶೋಕ, ಆಘಾತ ವ್ಯಕ್ತಪಡಿಸಿದ್ದಾರೆ. ಯೋಗಿ ಅವರು ತಮ್ಮ ಉಪ ಮುಖ್ಯಮಂತ್ರಿ ಕೇಶವ ಮೌರ್ಯ ಮತು ಸಚಿವ ನೀಲಕಂಠ ತಿವಾರಿ ಅವರನ್ನು ಚುರುಕಿನ ರಕ್ಷಣಾ ಕಾರ್ಯಾಚರಣೆಗಾಗಿ ವಾರಾಣಸಿಗೆ ತುರ್ತಾಗಿ ಕಳುಹಿಸಿಕೊಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next