Advertisement

ಉಳ್ಳಾಲದಿಂದ ಅಪಹರಿಸಿ ಚಾರ್ಮಾಡಿಯಲ್ಲಿ ಯುವಕನ ಕೊಲೆಗೆ ಯತ್ನ: ಅದೃಷ್ಟ ಚೆನ್ನಾಗಿತ್ತು ನೋಡಿ..

10:22 PM May 26, 2022 | Team Udayavani |

ಉಳ್ಳಾಲ : ಉಳ್ಳಾಲದ ಯುವಕನನ್ನು ಕಾರಿನಲ್ಲಿ ಅಪಹರಣ ನಡೆಸಿದ ಐವರ ತಂಡ ಚಾರ್ಮಾಡಿ ಘಾಟಿಯಲ್ಲಿ ಕೊಲೆಗೆ ಯತ್ನಿಸಿರುವ ಘಟನೆ ಬುಧವಾರ ತಡರಾತ್ರಿ ವೇಳೆ ನಡೆದಿದೆ. ತಂಡದಿಂದ ತಪ್ಪಿಸಿಕೊಂಡ ಯುವಕ ರಿಕ್ಷಾ ಮೂಲಕ ಉಳ್ಳಾಲ ತಲುಪಿ ತೊಕ್ಕೊಟ್ಟು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ .

Advertisement

ಉಳ್ಳಾಲ ದರ್ಗಾ ಬಳಿಯ ಕಬೀರ್‌ (26) ಅಪಹರಣಕ್ಕೊಳಗಾದ ಯುವಕ. ಸದಕತ್ತುಲ್ಲಾ ಯಾನೆ ಪೊಪ್ಪ, ಉಗ್ರಾಣಿ ಮುನ್ನ, ಇಮ್ಮಿ ಯಾನೆ ಇರ್ಷಾದಿ ಹಾಗೂ ತಾಹೀಬ್‌, ಅಸ್ಗರ್, ಇಬ್ಬಿ ಸೇರಿಕೊಂಡು ಈ ಕೃತ್ಯ ಎಸಗಿದ್ದಾರೆ ಎಂದು ಕಬೀರ್‌ ಆರೋಪಿಸಿದ್ದಾರೆ.

ಘಟನೆ ವಿವರ
ಘಟನೆಯ ಕುರಿತು ಕಬೀರ್‌ ಆರೋಪಿಸುವಂತೆ ಮೇ 25ರ ರಾತ್ರಿ 9ರ ಸುಮಾರಿಗೆ ಕೋಟೆಪುರ ಸಮೀಪ ಸಹೋದರನನ್ನು ಬಿಟ್ಟು, ಉಳ್ಳಾಲ ದರ್ಗಾ ಬಳಿಯ ತನ್ನ ಮನೆಯತ್ತ ಹಿಂತಿರುಗುತ್ತಿದ್ದಾಗ ನನ್ನ ಬೈಕ್‌ಗೆ ಅಬ್ಬಕ್ಕ ವೃತ್ತದ ಬಳಿ ಕಾರೊಂದು ಢಿಕ್ಕಿ ಹೊಡೆದಿದ್ದು, ನೆಲಕ್ಕುರುಳಿದ ನನ್ನನ್ನು ಕಾರಿನಿಂದ ಇಳಿದ ತಂಡ ಹಿಡಿಯಲು ಯತ್ನಿಸಿದಾಗ, ನನ್ನ ಕಾಲಿಗೆ ರಾಡ್‌ ಎಸೆದು ಓಡದಂತೆ ತಡೆದು, ತಲವಾರಿನ ಹಿಂಭಾಗದಿಂದ ತಲೆಯ ಹಿಂಭಾಗಕ್ಕೆ ಬಡಿದು ಬಳಿಕ ಕಾರೊಳಗಡೆ ಹಾಕಿ ಅಪಹರಿಸಿದ್ದಾರೆ.

ಕಾರಿನಲ್ಲಿದ್ದ ಐವರು ಅಪಹರಣಕಾರರು ಟ್ಯಾಬ್ಲೆಟ್‌ ಸ್ಟ್ರಿಪ್‌ ಹಿಡಿದುಕೊಂಡು ಸಂಪೂರ್ಣ ನಶೆಯಲ್ಲಿದ್ದರು. ದಾರಿಯುದ್ದಕ್ಕೂ ಟ್ಯಾಬ್ಲೆಟ್‌ ಸೇವಿಸುತ್ತಿದ್ದ ಅವರಿಗೆ ನನ್ನನ್ನು ಕೊಲೆ ಮಾಡುವಂತೆ ದೂರವಾಣಿ ಕರೆ ಬಂದಿದ್ದು, ಕಾರಿನ ಒಳಗಡೆ ಇದ್ದ ಐವರ ತಂಡದಲ್ಲಿ ಇಬ್ಬರು ಡ್ರಾಗರ್‌ ಅನ್ನು ಕುತ್ತಿಗೆಗೆ ಹಿಡಿದಿದ್ದರು. ದೂರದ ಚಾರ್ಮಾಡಿ ಘಾಟ್‌ ಸಮೀಪ ಕಾರು ನಿಲ್ಲಿಸಿದ ತಂಡ ಡ್ರಾಗರ್‌ ಮೂಲಕ ಕುತ್ತಿಗೆಗೆ ಇರಿಯಲು ಒಬ್ಟಾತ ಯತ್ನಿಸಿದ್ದು, ಆತನ ಕುತ್ತಿಗೆ ಹಿಡಿದು ದೂಡಿ ಕಾರಿನಿಂದ ಹೊರಗಿಳಿದು ತಪ್ಪಿಸಿಕೊಂಡೆ. ಈ ಸಂದರ್ಭದಲ್ಲಿ ಹೊಂಡವೊಂದಕ್ಕೆ ಉರುಳಿ ಗಾಯವಾಗಿದೆ. ಅಲ್ಲಿಂದ ಕಾಡಿನ ದಾರಿಯಲ್ಲಿ ಓಡಿ ಮನೆಯೊಂದರಲ್ಲಿ ನಡೆದ ಘಟನೆ ತಿಳಿಸಿದ್ದು, ಮನೆಯವರು ಟೀಶರ್ಟ್‌, ಚಪ್ಪಲಿಯನ್ನು ಒದಗಿಸಿದ್ದು, ಬಳಿಕ ರಿಕ್ಷಾವೊಂದರಲ್ಲಿ ಮಂಗಳೂರು ತಲುಪಿದೆ ಎಂದು ದೂರಿನಲ್ಲಿ ತಿಳಿಸಿದ್ದಾನೆ.

ಇದನ್ನೂ ಓದಿ : ಮಂಗಳೂರು : ಚೆಕ್‌ ಬೌನ್ಸ್‌ ಪ್ರಕರಣ ; 88 ಲ.ರೂ. ಪಾವತಿಸಲು ಆದೇಶ, ತಪ್ಪಿದರೆ 6 ತಿಂಗಳ ಸಜೆ 

Advertisement

ಫಿಶ್‌ಮಿಲ್‌ ವಿಚಾರ
ಕೋಟೆಪುರದಲ್ಲಿರುವ ಫಿಶ್‌ ಆಯಿಲ್‌ ಮಿಲ್‌ನಲ್ಲಿ ಪರಿಸರಕ್ಕೆ ಸಬಂಧಿಸಿಸ ಸಮಸ್ಯೆಯ ಹಿನ್ನಲೆಯಲ್ಲಿ ಸ್ಥಳೀಯ ನಿವಾಸಿಗಳು ಕೋಟೆಪುರ ನಿವಾಸಿಗಳು ಜಿಲ್ಲಾಡಳಿತಕ್ಕೆ ದೂರು ನೀಡಿದ್ದು, ಈ ವಿಚಾರದಲ್ಲಿ ತಡೆಯಾಜ್ಞೆ ಬಂದಿತ್ತು. ಹೋರಾಟದಲ್ಲಿ ಭಾಗವಹಿಸಿದ್ದ ಒಂದು ತಂಡ ಫಿಶ್‌ಮಿಲ್‌ನಿಂದ ಹಣ ಪಡೆದು ತಡೆಯಾಜ್ಞೆಯನ್ನು ಹಿಂಪಡೆಯುವಂತೆ ಮಾಡಿದ್ದರು. ಈ ವಿಚಾರದಲ್ಲಿ ಪ್ರಶ್ನಿಸಿದಕ್ಕೆ ಕೊಲೆ ನಡೆಸಲು ಆ ತಂಡ ಅಪಹರಿಸಿತ್ತು ಎಂದು ಹೇಳಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next