Advertisement

Ullal ಇಸ್ಪೀಟ್ ಅಡ್ಡೆಗೆ ದಾಳಿ; ಮೂವರ ಬಂಧನ

11:58 PM Dec 16, 2023 | Team Udayavani |

ಉಳ್ಳಾಲ: ಕೊಣಾಜೆ ಪೊಲೀಸ್‌ ಠಾಣಾ ವ್ಯಾಪ್ತಿಯ ಹರೇಕಳ ಗ್ರಾಮದ ರಾಜಗುಡ್ಡೆ ಎಂಬಲ್ಲಿ ಇಸ್ಪೀಟ್‌ ಆಟ ಆಡುತ್ತಿದ್ದ ಮೂವರನ್ನು ಬಂಧಿಸಿರುವ ಕೊಣಾಜೆ ಪೊಲೀಸರು ಅವರಿಂದ ನಗದು ಹಣ, ಸ್ಕೂಟರ್‌, ಸ್ಮಾರ್ಟ್‌ ಫೋನ್‌ ಸೇರಿದಂತೆ ಇಸ್ಪೀಟ್‌ ಆಟಕ್ಕೆ ಬಳಸಿದ್ದ ಎಲೆಗಳು ಸೇರಿದಂತೆ ಒಟ್ಟು 63,750 ರೂಗಳ ಸೊತ್ತನ್ನು ವಶಕ್ಕೆ ಪಡೆದಿದ್ದಾರೆ.

Advertisement

ಅಂಬ್ಲಿಮೊಗರು ಗ್ರಾಮದ ಗಟ್ಟಿಕುದ್ರು ನಿವಾಸಿ ಅನಿಲ್‌ ಡಿಸೋಜಾ (45), ಉಳ್ಳಾಲ ಕೋಡಿ ಡೌನ್‌ ರಸ್ತೆ ನಿವಾಸಿ ಹನೀಫ್‌ ಮಹಮ್ಮದ್‌ (32), ಜಪ್ಪಿನಮೊಗರು ನಿವಾಸಿ ಮಹಮ್ಮದ್‌ ನಾಜೀಮ್‌ (20) ಆರೋಪಿಗಳಾಗಿದ್ದು, ಪೊಲೀಸ್‌ ಆಯುಕ್ತರಾದ ಅನುಪಮ್‌ ಅಗರವಾಲ್‌ ಅವರ ನಿರ್ದೇಶನದಂತೆ, ಮಂಗಳೂರು ನಗರದ ಉಪ ಪೊಲೀಸ್‌ ಆಯುಕ್ತರಾದ ಸಿದ್ದಾರ್ಥ ಗೋಯಲ್‌, ದಿನೇಶ್‌ ಕುಮಾರ್‌ ಅವರ ಮಾರ್ಗದರ್ಶನದಂತೆ, ಮಂಗಳೂರು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್‌ ಆಯುಕ್ತೆ ಧನ್ಯ ಎನ್‌ ನಾಯಕ್‌, ಕೊಣಾಜೆ ಪೊಲೀಸ್‌ ಠಾಣಾ ಪ್ರಭಾರ ಪೊಲೀಸ್‌ ನಿರೀಕ್ಷಕರಾದ ಬಾಲಕೃಷ್ಣ ಹೆಚ್‌ ಎನ್‌, ಪೊಲೀಸ್‌ ಉಪ ನಿರೀಕ್ಷಕರಾದ ನಾಗರಾಜ್‌ ಎಸ್‌, ಪುನೀತ್‌ ಗಾಂವಕಾರ್‌, ಅಶೋಕ್‌, ವಿನೋದ್‌, ಎಎಸ್‌ಐ ಸಂಜೀವ್‌ ಸಿಬ್ಬಂದಿಗಳು ಭಾಗವಹಿದ್ದರು. ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next