Advertisement

ಉಳ್ಳಾಲ: ಪ್ರವಾಸಿಗರನ್ನು ಕರೆತಂದು ಸಮುದ್ರಪಾಲಾದ ಕ್ಯಾಬ್ ಚಾಲಕ

06:14 PM Jan 15, 2021 | Team Udayavani |

ಉಳ್ಳಾಲ: ಬೆಂಗಳೂರು ಮೂಲದ ಯುವಕನೋರ್ವ ಸಮ್ಮರ್ ಸ್ಯಾಂಡ್ ಬೀಚ್ ನಲ್ಲಿ ಸಮುದ್ರ ಪಾಲಾದ ಘಟನೆ ಇಂದು(ಜ.15) ನಡೆದಿದೆ.

Advertisement

ಕ್ಯಾಬ್ ಚಾಲಕನಾಗಿದ್ದ ನಾಗರಾಜ್  ಎಂಬಾತನೇ  ಸಮುದ್ರಪಾಲಾದ ಯುವಕ. ಬೆಂಗಳೂರಿನಿಂದ  ಸಮ್ಮರ್ ಸ್ಯಾಂಡ್ ಬೀಚ್ ಗೆ ಪ್ರವಾಸಿಗರನ್ಬು ಕರೆದುಕೊಂಡು ಬಂದು, ಸಮುದ್ರದ ತೆರೆಗಳಲ್ಲಿ ಆಡುತ್ತಿದ್ದಾಗ ಈ ದುರ್ಘಟನೆ ನಡೆದಿದೆ.  ವಿಹಾರಕ್ಕೆಂದು ಇಂದು ಮಧ್ಯಾಹ್ನ ಉಳ್ಳಾಲಕ್ಕೆ ಪ್ರವಾಸಿಗರು ಆಗಮಿಸಿದ್ದರು ಎಂದು ವರದಿಯಾಗಿದೆ.

ಸಮ್ಮರ್ ಸ್ಯಾಂಡ್ ನ ಅಣತಿ ದೂರದಲ್ಲಿ ಮೊಗವೀರಪಟ್ಣ (ಉಳ್ಳಾಲ) ಬೀಚ್ ಇದ್ದು. ಈ ಪ್ರದೇಶದಲ್ಲಿ ಸಾಮಾನ್ಯವಾಗಿ ಮೀನುಗಾರರು ಮತ್ತು ಸ್ಥಳೀಯ ಜೀವರಕ್ಷಕ ಈಜುಗಾರರು ಇರುತ್ತಾರೆ. ಆದರೆ ಇಂದು ಘಟನೆ ಸಂದರ್ಭದಲ್ಲಿ ಸ್ಥಳದಲ್ಲಿ ಸ್ಥಳೀಯರು ಯಾರು ಇರದ್ದರಿಂದ ಸಮುದ್ರಪಾಲಾಗುತ್ತಿದ್ದ ನಾಗರಾಜ್ ರಕ್ಷಣೆ ಸಾಧ್ಯವಾಗಲಿಲ್ಲ ಎನ್ನಲಾಗಿದೆ.

ಉಳ್ಳಾಲ ಪೊಲೀಸ್ ಠಾಣೆ ಯಲ್ಲಿ‌ಪ್ರಕರಣ ದಾಖಲಾಗಿದೆ

ಇದನ್ನೂ ಓದಿ: ಜಂಟಲ್‌ಮನ್‌ ಗೇಮ್ ನಲ್ಲಿ ಜನಾಂಗೀಯ ನಿಂದನೆ: ಮೋಯಿನ್ ಅಲಿಗೆ ‘ಒಸಾಮ’ ಎಂದಿದ್ದ ಆಸೀಸ್ ಆಟಗಾರ

Advertisement
Advertisement

Udayavani is now on Telegram. Click here to join our channel and stay updated with the latest news.

Next