Advertisement

ಬಳ್ಳಾರಿಯಲ್ಲಿ ಬಾಡಿಗೆ ಮನೆ ಪ್ರವೇಶಿಸಿದ ಉಗ್ರಪ್ಪ

06:25 AM Oct 20, 2018 | Team Udayavani |

ಬಳ್ಳಾರಿ: ಲೋಕಸಭೆ ಉಪಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವಿ.ಎಸ್‌.ಉಗ್ರಪ್ಪ ಅವರು ಬಳ್ಳಾರಿಯಲ್ಲಿ ಮನೆಯೊಂದನ್ನು ಬಾಡಿಗೆಗೆ ಪಡೆದಿದ್ದು, ವಿಜಯದಶಮಿಯಂದು ಗೃಹಪ್ರವೇಶ ಮಾಡಿದ್ದಾರೆ.

Advertisement

ಉಗ್ರಪ್ಪ ಹೊರಗಿನವರು, ಅಡ್ರೆಸ್‌ ಇಲ್ಲದವರು ಎಂದು ಬಿಜೆಪಿಯವರ ಆರೋಪಕ್ಕೆ ಗುರಿಯಾಗಿದ್ದ ವಿ.ಎಸ್‌. ಉಗ್ರಪ್ಪ, ಮನೆ ಮಾಡಲು ನಿರ್ಧರಿಸಿ ಮನೆಯೊಂದನ್ನು ಬಾಡಿಗೆಗೆ ಪಡೆದಿದ್ದಾರೆ. ಅಲ್ಲದೆ ವಿಜಯ ದಶಮಿಯಂದು ಗೃಹಪ್ರವೇಶ ಮಾಡುವ ಮೂಲಕ ಪ್ರತಿಸ್ಪರ್ಧಿ ಮತ್ತವರ ಬೆಂಬಲಿಗರ ಆರೋಪಗಳಿಗೆ ತಿರುಗೇಟು ನೀಡಿದ್ದಾರೆ.

ಇಲ್ಲಿನ ಕಪ್ಪಗಲ್‌ ರಸ್ತೆಯ ಸರ್‌.ಎಂ.ವಿಶ್ವೇಶ್ವರಯ್ಯ ನಗರದ 1ನೇ ಅಡ್ಡರಸ್ತೆಯಲ್ಲಿರುವ ಎರಡು ಅಂತಸ್ತಿನ ಮನೆಯನ್ನು ಬಾಡಿಗೆಗೆ ಪಡೆದು ಇಲ್ಲಿಯೇ ಉಳಿಯಲು ನಿರ್ಧರಿಸಿದ್ದಾರೆ.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಉಗ್ರಪ್ಪ, “ನಾನು ಇನ್ಮುಂದೆ ಇಲ್ಲೇ ಇರುವೆ. ಅಡ್ರೆಸ್‌ ಇಲ್ಲದವರು ಎನ್ನುತ್ತಿದ್ದವರಿಗೆ ಅಡ್ರೆಸ್‌ ತಿಳಿಸುವ ಕಾರಣಕ್ಕೆ ಮನೆಯನ್ನು ಬಾಡಿಗೆಗೆ ಪಡೆದಿದ್ದೇನೆ. ಇನ್ಮುಂದೆ ನನಗೆ ಇಲ್ಲಿಯದೇ ಅಡ್ರೆಸ್‌. ಚುನಾವಣೆಯಲ್ಲಿ ಸೋತರೂ ಇಲ್ಲೇ ಇರುವೆ. ನನ್ನ ಪ್ರವಾಸ ಬಳ್ಳಾರಿಯತ್ತ ಕಡ್ಡಾಯವಾಗಿ ಇದ್ದೇ ಇರುತ್ತದೆ’ ಎಂದರು

Advertisement

Udayavani is now on Telegram. Click here to join our channel and stay updated with the latest news.

Next