Advertisement

Udupi: ವೃದ್ಧೆಯ ಸರ ಕಸಿದು ಪರಾರಿ

12:15 AM Aug 06, 2024 | Team Udayavani |

ಉಡುಪಿ: ಉಡುಪಿ ಹಾಗೂ ಮಣಿಪಾಲ ಭಾಗದಲ್ಲಿ ವಿಭಿನ್ನ ಮಾದರಿಯ ಕಳ್ಳತನ ಪ್ರಕರಣಗಳು ದಿನನಿತ್ಯ ವರದಿಯಾಗುತ್ತಿದೆ.

Advertisement

ಮಣಿಪಾಲ ಠಾಣೆ ವ್ಯಾಪ್ತಿಯ ಹಯಗ್ರೀವ ನಗರದ ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಶಾಂತಾ ಕಾಮತ್‌ (84) ಅವರ 20 ಗ್ರಾಂ ತೂಕದ ಚೈನ್‌ ಅನ್ನು ಕಳ್ಳನೊಬ್ಬ ಕಸಿದು ಪರಾರಿಯಾಗಿರುವ ಘಟನೆ ಆ.5ರಂದು ಬೆಳಗ್ಗೆ 7 ಗಂಟೆಗೆ ಸಂಭವಿಸಿದೆ.

ಶಾಂತಾ ಮನೆ ಕೆಲಸಕ್ಕೆಂದು ಸಗ್ರಿನೋಳೆ ಶಾಲೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕುಂಡೇಲು ಎಂಬಲ್ಲಿಗೆ ತಲುಪಿದಾಗ ಹಿಂದುಗಡೆಯಿಂದ ಬಂದ ವ್ಯಕ್ತಿ ಚೈನ್‌ ಕಸಿದು ಪರಾರಿಯಾಗಿದ್ದಾನೆ.ಕಳ್ಳ ಸುಮಾರು 30ರಿಂದ 35 ವರ್ಷದವನು ಎಂದು ಅಂದಾಜಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next