Advertisement

ಉಡುಪಿ ಜಿಲ್ಲೆ ಗಡಿ ಬಂದ್‌: ಪಲಿಮಾರಿನಲ್ಲಿ ತಡೆಗೋಡೆ; ತೀವ್ರ ನಿಗಾ

12:28 PM Apr 12, 2020 | Sriram |

ಉಡುಪಿ / ಪಡುಬಿದ್ರಿ: ಉಡುಪಿ ಜಿಲ್ಲೆಯ ಗಡಿಗಳನ್ನು ಶನಿವಾರದಿಂದ ಸಂಪೂರ್ಣವಾಗಿ ಬಂದ್‌ ಮಾಡಲಾಗಿದೆ. ಶೀರೂರು, ಹೆಜಮಾಡಿ, ಪಲಿಮಾರು, ಸೋಮೇಶ್ವರ, ಮಾಳ, ಹೊಸಂಗಡಿ ಮೊದಲಾದೆಡೆ ಗಳಲ್ಲಿರುವ ಗಡಿಯ ಚೆಕ್‌ಪೋಸ್ಟ್‌ಗಳಲ್ಲಿ ಬಂದೋಬಸ್ತ್ ಬಿಗಿ ಗೊಳಿಸಲಾಗಿದೆ. ಅಗತ್ಯ ವಸ್ತುಗಳಾದ ಪತ್ರಿಕೆ, ಹಾಲು, ಆ್ಯಂಬುಲೆನ್ಸ್‌, ತರಕಾರಿ, ಆಹಾರ ವಸ್ತು ಇತ್ಯಾದಿಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಬೇರೆ ವಾಹನಗಳಿಗೆ ಅವಕಾಶ ನೀಡಲಿಲ್ಲ.

Advertisement

ಉಡುಪಿ ಮತ್ತು ದ.ಕ. ಜಿಲ್ಲೆಯ ಗಡಿ ಪಲಿಮಾರು ಸೇತುವೆಗೆ ಮಣ್ಣು ಹಾಕಿ ತಡೆಗೋಡೆ ನಿರ್ಮಿಸಲಾಗಿದೆ. ಶನಿವಾರ ಭೇಟಿ ನೀಡಿದ ಕಾಪು ತಹಶೀಲ್ದಾರ್‌, ತಡೆಗೋಡೆ ನಿರ್ಮಿಸಲು ಗ್ರಾಮಕರಣಿಕರು ಮತ್ತು ಗ್ರಾ.ಪಂ. ಪಿಡಿಒ ಅವರಿಗೆ ಸೂಚಿಸಿದರು.

ರಾ. ಹೆದ್ದಾರಿ ಮೂಲಕ ಹೋಗಿ ಬರಲು ಕಷ್ಟವಾದ ಕಾರಣ ವಾಹನ ಸವಾರರು ಕರ್ನಿರೆ ಮೂಲಕ ಪಲಿಮಾರು ದಾರಿಯಾಗಿ ಉಡುಪಿ ಜಿಲ್ಲೆಗೆ ಬರುತ್ತಿದ್ದರು. ಇದರ ಬಗ್ಗೆ ದೂರುಗಳು ಬಂದ ಕಾರಣ ತಹಶೀಲ್ದಾರ್‌ ಭೇಟಿ ನೀಡಿದ್ದರು. ಪೊಲೀಸ್‌ ಚೆಕ್‌ಪೋಸ್ಟ್‌ ಕಷ್ಟಸಾಧ್ಯವೆಂಬ ಕಾರಣಕ್ಕೆ ಐದು ಲೋಡ್‌ ಕೆಂಪು ಮಣ್ಣು ಹಾಕಿ ಗಡಿ ಬಂದ್‌ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next