Advertisement

Udupi; ಗೀತಾರ್ಥ ಚಿಂತನೆ 58-ಒಳ್ಳೆಯ ಕೆಲಸ, ಕೆಟ್ಟ ಕೆಲಸ: ಸಜ್ಜನ, ದುರ್ಜನ ಲಕ್ಷಣ

01:14 AM Oct 08, 2024 | Team Udayavani |

ದೂರವಿರುವ ಪಾಂಡವರ ಸೈನ್ಯವನ್ನು ಈ ಸೈನ್ಯವೆಂದು (ಇದಂ), ಹತ್ತಿರವಿದ್ದ ಕೌರವರ ಸೈನ್ಯವನ್ನು ಆ ಸೈನ್ಯವೆಂದು (ತತ್‌) ದುರ್ಯೋಧನ ಹೇಳುತ್ತಾನೆ. ನನ್ನ ಸೈನ್ಯ ಅಪರ್ಯಾಪ್ತವಾಗಿದೆ ಎಂದೂ, ನಮ್ಮ ಬಲ ದುರ್ಬಲವಾಗಿದೆ ಎಂದೂ ನಾಯಕರನ್ನುದ್ದೇಶಿಸಿ ಹೇಳುತ್ತಾನೆ. ನಾನೇ ನಾಯಕ ಎಂಬರ್ಥ ಇಲ್ಲಿದೆ. ದುಯೋಧನನ ಮನಃಸ್ಥಿತಿ ಹೇಗೆಂದರೆ “ಒಳ್ಳೆಯದೆಲ್ಲ ನನ್ನಿಂದ, ಕೆಟ್ಟದ್ದೆಲ್ಲ ನಿಮ್ಮಿಂದ’ ಎಂಬಂತೆ.

Advertisement

“ಒಳ್ಳೆಯದಾದರೆ ಗುರು, ದೇವರಿಂದ, ಕೆಟ್ಟದ್ದಾದರೆ ನಮ್ಮಿಂದ’ ಎನ್ನುವುದು ಸಜ್ಜನರ ಲಕ್ಷಣ. ದುಯೋಧನ ಸೇನಾನಾಯಕರಾದ ಭೀಷ್ಮಾಚಾರ್ಯರನ್ನು ರಕ್ಷಿಸಲು ಗುಂಪಿನವರಿಗೆ ಹೇಳುತ್ತಾನೆ. ಅಂದರೆ ಭೀಷ್ಮರ ಮೇಲೆ ಆತನಿಗೆ ಮನಸ್ಸಿರಲಿಲ್ಲ. ಹಿರಿಯರಾದ ಕಾರಣ ಬಿಡಲು ಆಗದೆ ಸೇನಾಪತಿಯಾಗಿ ಮಾಡಿದ್ದಾನೆ. ಆತ ಭೀಷ್ಮರಿಗಿಂತಲೂ ದ್ರೋಣರಿಗೆ ಹತ್ತಿರವಾಗಿದ್ದ. ಭೀಷ್ಮರು ಪಾಂಡವಪಕ್ಷಪಾತಿ ಎಂದು ದುರ್ಯೋಧನ ತಿಳಿದುಕೊಂಡಿದ್ದ. ವಯಸ್ಸಾಗಿದ್ದರೂ ಭೀಷ್ಮರು ಆ ಕಾಲದಲ್ಲಿ ನಂಬರ್‌ 1 ವೀರರು. ಅವರ ಮುಖ್ಯ ಉದ್ದೇಶ ಸಿಂಹಾಸನ, ವಂಶದ ರಕ್ಷಣೆ. ದುರ್ಯೋಧನ ಹೇಳಿದ್ದನ್ನು ಕೇಳಿಸಿಕೊಂಡ ಭೀಷ್ಮರು ಶಂಖನಾದವನ್ನು (ಸಿಂಹನಾದ) ಮೊಳಗಿಸಿದರು. ತತ್‌ಕ್ಷಣವೇ ಕೃಷ್ಣಾರ್ಜುನರು ಶಂಖವನ್ನು ಊದಿದರು. ಅಂದರೆ ಮೊದಲು ಯುದ್ಧವನ್ನು ಸಾರಿದವರು ಕೌರವರು ಎಂಬುದು ಶಂಖನಾದದಿಂದ ಸಾಬೀತಾಗುತ್ತದೆ. ಜಗಳದಲ್ಲಿ ಮೊದಲು ಆರಂಭಿಸಿದವನೇ ಆರೋಪಿ.

ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,

ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811

Advertisement

Udayavani is now on Telegram. Click here to join our channel and stay updated with the latest news.

Next