Advertisement

Udupi: ಅಸಹಾಯಕ ಸ್ಥಿತಿಯಲ್ಲಿದ್ದ ಬಾಲಕಿಯ ರಕ್ಷಣೆ

08:28 PM Oct 07, 2024 | Team Udayavani |

ಉಡುಪಿ: ಇಂದ್ರಾಳಿ ರೈಲು ನಿಲ್ದಾಣದಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ಅಪ್ರಾಪ್ತ ವಯಸ್ಸಿನ ಅಸ್ಸಾಂ ಮೂಲದ ಬಾಲಕಿಯನ್ನು ರಕ್ಷಿಸಲಾಗಿದೆ.

Advertisement

ಅನುಮಾನಾಸ್ಪದ ವರ್ತನೆ ಗಮನಿಸಿದ ರೈಲ್ವೇ ಇನ್‌ಸ್ಪೆಕ್ಟರ್‌ ಮಧುಸೂದನ್‌, ಆರ್‌ಪಿಎಫ್ ಅಪರ್ಣಾ ಕೆ. ಅವರು ವಿಚಾರಣೆ ನಡೆಸಿದಾಗ ಬಾಲಕಿ ಮನೆ ಬಿಟ್ಟು ಬಂದಿರುವುದು ತಿಳಿದುಬಂತು. ಮಕ್ಕಳ ರಕ್ಷಣೆ ಘಟಕವು ಆಕೆಗೆ ಆಶ್ರಯ ಒದಗಿಸಿದೆ.

ಕಾರ್ಯಾಚರಣೆಗೆ ಸಮಾಜಸೇವಕ ನಿತ್ಯಾನಂದ ಒಳಕಾಡು, ಆರಕ್ಷಕಿ ನವ್ಯಾ, ಮಕ್ಕಳ ಸಹಾಯವಾಣಿಯ ಲಕ್ಷ್ಮೀಕಾಂತ್‌ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next