Advertisement

Mumbai; ಉದ್ಧವ್ ಠಾಕ್ರೆ- ಶರದ್ ಪವಾರ್ ರಹಸ್ಯ ಸಭೆ

05:15 PM Sep 12, 2023 | Team Udayavani |

ಮುಂಬಯಿ: ನ್ಯಾಶನಲಿಸ್ಟ್‌ ಕಾಂಗ್ರೆಸ್‌ ಪಕ್ಷದ ಮುಖ್ಯಸ್ಥ ಶರದ್‌ ಪವಾರ್‌ ಮತ್ತು ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರು ಮುಂಬಯಿಯಲ್ಲಿರುವ ಎನ್‌ಸಿಪಿ ನಾಯಕನ ಸಿಲ್ವರ್‌ ಓಕ್‌ ನಿವಾಸದಲ್ಲಿ ಮಂಗಳವಾರ ಸಭೆ ನಡೆಸಿದರು.

Advertisement

ಸುಮಾರು 90 ನಿಮಿಷಗಳ ಕಾಲ ಸಭೆ ನಡೆಯಿತು, ಆದರೆ ಅದರ ವಿವರಗಳು ಇನ್ನೂ ತಿಳಿದುಬಂದಿಲ್ಲ. ಮಹಾರಾಷ್ಟ್ರ ಎನ್‌ಸಿಪಿ ಅಧ್ಯಕ್ಷ ಜಯಂತ್‌ ಪಾಟೀಲ್‌ ಮತ್ತು ಶಿವಸೇನೆ (ಯುಬಿಟಿ) ರಾಜ್ಯಸಭಾ ಸದಸ್ಯ ಸಂಜಯ್‌ ರಾವುತ್‌ ಕೂಡ ಸಭೆಯಲ್ಲಿ ಭಾಗವಹಿಸಿದ್ದರು ಎಂದು ಎನ್‌ಸಿಪಿ ಕಾರ್ಯಕಾರಿಯೊಬ್ಬರು ತಿಳಿಸಿದ್ದಾರೆ.

ಶರದ್‌ ಪವಾರ್‌ ಅವರ ಪಕ್ಷವು ಶಿವಸೇನೆ (ಯುಬಿಟಿ) ಮತ್ತು ಕಾಂಗ್ರೆಸ್‌ ಜೊತೆಗೆ ವಿರೋಧ ಪಕ್ಷವಾದ ಮಹಾ ವಿಕಾಸ್‌ ಅಘಾಡಿ (ಎಂವಿಎ) ಯ ಒಂದು ಘಟಕವಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next