Advertisement

ಉದಯವಾಣಿಗೆ ‘ಅಂತಾರಾಷ್ಟ್ರೀಯ ಯೋಗ ದಿನದ ಮಾಧ್ಯಮ ಪುರಸ್ಕಾರ’

09:37 AM Jan 08, 2020 | Team Udayavani |

ಹೊಸದಿಲ್ಲಿ: ಕರ್ನಾಟಕದ ಜನಪ್ರಿಯ ದೈನಿಕ ‘ಉದಯವಾಣಿ’ ಅಂತಾರಾಷ್ಟ್ರೀಯ ಯೋಗ ದಿನದ ಮಾಧ್ಯಮ ಪುರಸ್ಕಾರಕ್ಕೆ ಪಾತ್ರವಾಗಿದೆ. ಇಂದು ಹೊಸದಿಲ್ಲಿಯ ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಭಾಗವಹಿಸಿ ಪ್ರಶಸ್ತಿ ವಿತರಿಸಿದರು.

Advertisement

2019ರ ಸಾಲಿನಲ್ಲಿ ಯೋಗದ ಮಹತ್ವದ ಕುರಿತು ಬೆಳಕು ಚೆಲ್ಲಿದ ಮಾಧ್ಯಮಗಳಿಗೆ ರಾಷ್ಟ್ರೀಯ ಪುರಸ್ಕಾರ ನೀಡಲಾಗಿದ್ದು, ಕನ್ನಡ ಪತ್ರಿಕೆಗಳ ವಿಭಾಗದಲ್ಲಿ ‘ಉದಯವಾಣಿ’ಗೆ ಪುರಸ್ಕಾರ ಲಭಿಸಿದೆ.

ಉದಯವಾಣಿ ಬೆಂಗಳೂರು ಆವೃತ್ತಿಯ ಸಂಪಾದಕ ಎ.ವಿ. ಬಾಲಕೃಷ್ಣ ಹೊಳ್ಳ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರಿಂದ ಪುರಸ್ಕಾರ ಸ್ವೀಕರಿಸಿದರು.

ಮುದ್ರಣ ಮಾಧ್ಯಮ ವಿಭಾಗದಲ್ಲಿ 11 ಪ್ರಶಸ್ತಿಗಳು, ಸುದ್ದಿ ವಾಹಿನಿ ವಿಭಾಗದಲ್ಲಿ ಎಂಟು ಪ್ರಶಸ್ತಿಗಳು ಮತ್ತು ರೇಡಿಯೋ ವಿಭಾಗದಲ್ಲಿ 11 ಪ್ರಶಸ್ತಿಗಳನ್ನು ಇಂದು ಕೊಡಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next