Advertisement

ಯುವಕನ ಕೊಲೆ; ಇಬ್ಬರು ಆರೋಪಿಗಳ ಬಂಧನ

02:15 PM Apr 10, 2022 | Team Udayavani |

ಹರಿಹರ: ಕಳೆದ ಮಾ. 16 ರಂದು ನಗರದ ಗಾಂಧಿ ಮೈದಾನದ ವಾಣಿಜ್ಯ ಸಂಕೀರ್ಣದ ಅಂಬೇಮಾ ವೈನ್ಸ್‌ ಅಂಗಡಿ ಮುಂಭಾಗ ಶವವಾಗಿ ಪತ್ತೆಯಾಗಿದ್ದ ಗಂಗನರಸಿ ಗ್ರಾಮದ ಗಿರೀಶ್‌ ಎಂಬ ಯುವಕ ಕೊಲೆಗೀಡಾಗಿರುವುದು ಖಚಿತವಾಗಿದ್ದು, ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

Advertisement

ನಗರದ ಎ.ಕೆ. ಕಾಲೋನಿ ಒಂದನೇ ಕ್ರಾಸ್‌ ನ ನಿವಾಸಿಗಳಾದ ಮಂಜ (31) ಮತ್ತು ಶಿವು (22) ಬಂಧಿತ ಆರೋಪಿಗಳು.

ರಕ್ತದ ಮಡುವಿನಲ್ಲಿದ್ದ ಶವದ ತಲೆ ಪಕ್ಕದಲ್ಲಿ ದೊಡ್ಡ ಸೆ„ಜಗಲ್ಲು ಇದ್ದುದರಿಂದ, ತಲೆಯಲ್ಲಿ ಒಂದು ಕಡೆ ಮಾತ್ರ ಗಾಯವಾಗಿದ್ದು, ತಲೆ ಹಾಗೂ ಮುಖ ಜಜ್ಜಿರದ ಕಾರಣ ಯುವಕನೇ‌ ಕಲ್ಲಿಗೆ ಬಿದ್ದು ಗಾಯ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿತ್ತು. ಆದರೆ ಕೊಲೆ ಪ್ರಕರಣವೆಂದು ಗಿರೀಶ್‌ ಕುಟುಂಬದವರು ದೂರು ದಾಖಲಿಸಿದ ನಂತರ ಪೊಲೀಸರು ಪ್ರಕರಣದ ಬೆನ್ನು ಹತ್ತಿದ್ದರು. ಆರೋಪಿಗಳು ಅತಿಯಾದ ಮದ್ಯ ಸೇವನೆ ಮಾಡುವವರಾಗಿದ್ದು, ಅಂಗಡಿ, ಮುಂಗಟ್ಟುಗಳ ಮುಂದೆ ಮಲಗಿದವರ ಮೇಲೆ ಹಲ್ಲೆ ನಡೆಸಿ ಮೊಬೈಲ್‌, ಹಣ ಕಿತ್ತುಕೊಳ್ಳುತ್ತಿದ್ದರು.

ಇತ್ತೀಚಿಗೆ ನಗರದ ತಾಪಂ ಕಚೇರಿ ಎದುರು ಮಲಗಿದ್ದ ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು ಸೇರಿದಂತೆ ಆರೋಪಿಗಳು ಈಗಾಗಲೆ ಇಂಥದ್ದೇ ನಾಲ್ಕು ಪ್ರಕರಣ ಎಸಗಿರುವುದು ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ವಿಕೃತ ಮನೋಭಾವದವರಿದ್ದು, ಇಂತಹವರ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು. ಅಂಗಡಿ, ಮುಂಗಟ್ಟುಗಳ ಮುಂದೆ, ಮನೆ ಕಟ್ಟೆ ಮೇಲೆ ಯಾರೂ ಮಲಗಬಾರದೆಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್‌ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

Advertisement

ಡಿವೈಎಸ್‌ಪಿ ಬಸವರಾಜ್‌ ಬಿ.ಎಸ್‌., ಸಿಪಿಐ ಸತೀಶ್‌ಕುಮಾರ್‌ ಯು., ಪಿಎಸ್‌ಐ ಸುನೀಲ್‌ಕುಮಾರ್‌ ತೇಲಿ, ಎಎಸ್‌ಐ ಯಾಸೀನ್‌ ಉಲ್ಲಾ, ಸಿಬ್ಬಂದಿಗಳಾದ ಸುಣಗಾರ ನಾಗರಾಜ್‌, ಶಾಂತಕುಮಾರ್‌, ಸೈಯದ್‌ ಗಫಾರ್‌, ರಾಜಶೇಖರ್‌, ಶಿವರಾಜ್‌, ನಾಗರಾಜ್‌, ಸಿದ್ದೇಶ್‌, ಸಿಸಿಟಿವಿ ಮಂಜುನಾಥ್‌ ಪ್ರಕರಣ ಪತ್ತೆ ತಂಡದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next