Advertisement

ಜಯ ಪ್ರಕಾಶ್‌ ಹೆಗ್ಡೆ ಪರ ಟ್ವಿಟರ್‌ ಟ್ರೆಂಡ್‌

12:17 AM Mar 17, 2019 | |

ಉಡುಪಿ: ಮಾಜಿ ಸಂಸದ, ಮಾಜಿ ಸಚಿವ ಕೆ. ಜಯಪ್ರಕಾಶ್‌ ಹೆಗ್ಡೆಯವರಿಗೆ ಉಡುಪಿ -ಚಿಕ್ಕಮಗಳೂರು ಕ್ಷೇತ್ರದಬಿಜೆಪಿ ಟಿಕೆಟ್‌ ನೀಡಬೇಕೆಂದು ಕಾರ್ಯಕರ್ತರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರಿಗೆ ಟ್ವೀಟ್‌ ಮಾಡುವ ಮೂಲಕ ಟ್ವಿಟರ್‌ ಟ್ರೆಂಡ್‌ ಮಾಡಿದ್ದಾರೆ. ಇದು ಶನಿವಾರ ಬೆಳಗ್ಗೆ ಐದನೆಯ ಸ್ಥಾನದಲ್ಲಿದ್ದರೆ ಸಂಜೆ ಹೊತ್ತು ಮೊದಲ ಸ್ಥಾನಕ್ಕೇರಿದೆ. ಸಂಜೆ 6.15 ಗಂಟೆ ಹೊತ್ತಿಗೆ 6,240 ಸಂದೇಶಗಳನ್ನು ರವಾನಿಸಲಾಗಿತ್ತು. ಸಂದೇಶವನ್ನು ಅಮಿತ್‌ ಶಾ, ಪ್ರಧಾನಿ ನರೇಂದ್ರ ಮೋದಿ, ಸಹಸಂಘಟನ ಕಾರ್ಯದರ್ಶಿ ಸಂತೋಷ್‌ ಅವರಿಗೆ ಟ್ಯಾಗ್‌ ಮಾಡಲಾಗಿದೆ. ಟಿಕೆಟ್‌
ಹಂಚಿಕೆಯ ಸಂಸದೀಯ ಮಂಡಳಿ ಸಭೆ ನಡೆಯುವ ವೇಳೆ ಈ ಟ್ರೆಂಡ್‌ ಮೂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next