Advertisement

ರಾ.ಹೆ. ದುರಸ್ತಿಗೆ ಟ್ವಿಟರ್‌ ಅಭಿಯಾನ

01:43 AM Nov 08, 2019 | mahesh |

ಮಂಗಳೂರು: ಮಂಗಳೂರು- ಬೆಂಗಳೂರು ರಾ. ಹೆದ್ದಾರಿ ದುರಸ್ತಿಗೆ ಆಗ್ರಹಿಸಿ ಕರಾವಳಿಯ ಟ್ವೀಟಿಗರು “ಸೇವ್‌ ಎನ್‌ಎಚ್‌75′ ಅಭಿಯಾನ ಆರಂಭಿಸಿದ್ದಾರೆ. ಮಂಗಳೂರಿನಿಂದ ಹಾಸನದವರೆಗಿನ ರಸ್ತೆಯ ದುಃಸ್ಥಿತಿಯನ್ನು ಟ್ವೀಟ್‌ ಮೂಲಕ ಖಂಡಿಸಿ, ದುರಸ್ತಿಗೆ ಆಗ್ರಹಿಸಿ ಜನಪ್ರತಿನಿಧಿಗಳ ಗಮನ ಸೆಳೆಯುತ್ತಿದ್ದಾರೆ.

Advertisement

ಹೊಂಡಗುಂಡಿಗಳ ಹೆದ್ದಾರಿಯಲ್ಲಿ ಸಂಚಾರ ಸವಾಲಾಗಿದೆ. ಅಭಿಯಾನಕ್ಕೆ ಧ್ವನಿಗೂಡಿಸಿದ ಮಣಿಪಾಲ್‌ ಗ್ಲೋಬಲ್‌ ಎಜುಕೇಶನ್‌ ಚೇರ್‌ಮನ್‌ ಟಿ.ವಿ. ಮೋಹನ್‌ದಾಸ್‌ ಪೈ, ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರನ್ನು ಟ್ಯಾಗ್‌ ಮಾಡಿ ರಾ.ಹೆ. 75ರ ದುರಸ್ತಿಗೆ ಆಗ್ರಹಿಸಿದ್ದಾರೆ. ಪ್ರಧಾನಿ ಮೋದಿ, ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ, ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದ ನಳಿನ್‌ ಮೊದಲಾದವರನ್ನು ಟ್ಯಾಗ್‌ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next