Advertisement

ಹೆಬ್ರಿ: ಕಾಲು ಜಾರಿ ಬಾವಿಗೆ ಬಿದ್ದ ಪ್ರಕರಣ; ಅಣ್ಣನೇ ತಮ್ಮನ ಕೊಲೆಗೈದಿರುವ ಶಂಕೆ

03:51 PM Jan 15, 2022 | Team Udayavani |

ಹೆಬ್ರಿ : ಶಿವಪುರ ಗ್ರಾಮದ  ಕಾಳಾಯಿ ಮುಳ್ಳುಗುಡ್ಡೆ ನಿವಾಸಿ ರವಿರಾಜ್ ಶೆಟ್ಟಿಗಾರ(43) ಎಂಬವರು ಜ.13ರಂದು ಕಾಲು ಜಾರಿ ಬಾವಿ ಬಿದ್ದು ಮೃತ ಪಟ್ಟ ಪ್ರಕರಣ ತನಿಖೆ ವೇಳೆ ಕೊಲೆ ಎಂಬ ಶಂಕೆ ವ್ಯಕ್ತವಾಗಿದೆ.

Advertisement

ಮೃತಪಟ್ಟ ವ್ಯಕ್ತಿಯ ಅಣ್ಣ  ಜಯರಾಮ ಸೆಟ್ಟಿಗಾರ ಎಂಬವರು  ಠಾಣೆಗೆ ಬಂದು ನನ್ನ ತಮ್ಮ ರವಿರಾಜ ಶೆಟ್ಟಿಗಾರ  ಅವರ ಮನೆಯ ಹತ್ತಿರದ  ಆವರಣವಿಲ್ಲದ ಬಾವಿಯಲ್ಲಿ ನೀರನ್ನು ತೆಗೆಯಲು ಬಕೇಟಿಗೆ ಹಗ್ಗ ಕಟ್ಟಿ ಬಾವಿಯಿಂದ ನೀರನ್ನು ಎಳೆಯುವಾಗ ಅವರ ಕಾಲು ಜಾರಿ ಬಾವಿಯ ನೀರಿಗೆ ಬಿದ್ದು ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿರುವುದಾಗಿದೆ. ಆದರೆ ಮೃತರ ದೇಹದಲ್ಲಿ ಗಾಯ  ಇದ್ದು ಇನ್ನೊಬ್ಬ ತಮ್ಮ ಶಂಕರನಾರಾಯಣ ಎಂಬವ ಮನೆಯ ಬಳಿಯ ಕೋಣೆಯ ಮಾಡನ್ನು ಮೃತ ರವಿರಾಜ ಶೆಟ್ಟಿಗಾರ ರವರಿಗೆ ಹೇಳದೇ ಕಿತ್ತು ಹಾಕಿದ್ದು ಈ ಬಗ್ಗೆ ವಾದವಿವಾದ ನಡೆದಿದೆ. ಮೃತ ದೇಹದಲಿ ಗಾಯ ಇರುವುದರಿಂದ ಕೊಲೆಯಾಗಿರಬಹುದು ಎಂಬ ಸಂಶಯ ಇದ್ದು ಸೂಕ್ತ ತನಿಖೆ ನಡೆಸುವಂತೆ ಹೆಬ್ರಿ ಠಾಣೆಗೆ ದೂರು ನೀಡಿದ್ದರು.

ಘಟನೆಗೆ ಸಂಬಂಧಿಸಿದಂತೆ  ಹೆಬ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು  ಠಾಣಾಧಿಕಾರಿ ಮಹೇಶ್ ಅವರ ನೇತೃತ್ವದಲ್ಲಿ ತನಿಖೆ ಮುಂದುವರಿಸಿದ್ದು  ಮೃತ ದೇಹದ ಶವ ತನಿಖಾ ವೇಳೆಯಲ್ಲಿ ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಮನೆಯ ಬಳಿ ಇರುವ ಕೋಣೆಯ ಮಾಡನ್ನು ಕಿತ್ತು ಹಾಕಿರುವ ವಿಚಾರದಲ್ಲಿ ವೈಮನಸ್ಸು ಇದ್ದು ಮೃತನ ಅಣ್ಣ ಶಂಕರನಾರಾಯಣ ಸೆಟ್ಟಿಗಾರ ಮೃತ ರವಿರಾಜ ಸೆಟ್ಟಿಗಾರ ಅವರನ್ನು  ಹರಿತವಾದ ಆಯಧದಿಂದ ಬಲವಾಗಿ ಕಡಿದು ಬಾವಿಗೆ ದೂಡಿ ಹಾಕಿ ಕೊಲೆ ಮಾಡಿರುವುದಾಗಿ  ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next