Advertisement

Guruvayur Shri Krishna Temple; ಇನ್ನು ಕೃಷ್ಣನಿಗೆ ತುಳಸಿ ನಿಷೇಧ

01:37 AM Oct 28, 2024 | Team Udayavani |

ತಿರುವನಂತಪುರ: ಕೇರಳದ ಪ್ರಖ್ಯಾತ ಗುರುವಾಯೂರು ದೇವಸ್ಥಾನದಲ್ಲಿ ಶ್ರೀಕೃಷ್ಣನಿಗೆ ಪ್ರಿಯವಾದ “ತುಳಸಿ’ ಸಮರ್ಪಿಸುವುದನ್ನೇ ನಿಷೇಧಿಸಲಾಗಿದೆ. ಭಕ್ತರು ತರುವ ತುಳಸಿ ಯಲ್ಲಿ ಅತಿಯಾದ ಕೀಟನಾಶಕ ಇದ್ದು, ದೇಗುಲದ ಸಿಬಂದಿಗೆ ಅಲರ್ಜಿ-ತುರಿಕೆಯಂಥ ಸಮಸ್ಯೆಗಳಾಗುತ್ತಿದ್ದು, ಈ ನಿರ್ಧಾರ ಕೈಗೊಳ್ಳಲಾಗಿದೆ. ಬಹುತೇಕ ಭಕ್ತರು ಅಂಗಡಿಗಳಿಂದ ತುಳಸಿ ತರುತ್ತಾರೆ. ವ್ಯಾಪಾರಸ್ಥರು ತುಳಸಿ ಹಾಳಾಗದಂತೆ ರಕ್ಷಿಸಲು ಹೆಚ್ಚಿನ ಕೀಟನಾಶಕ ಸಿಂಪಡಿಸಿರುತ್ತಾರೆ. ಹೀಗಾಗಿ ತುಳಸಿ ನಿಷೇಧಿಸಲಾಗಿದೆ ದೇಗುಲಕ್ಕೆ ಅಗತ್ಯವಿರುವಷ್ಟು ಕೀಟನಾಶಕ ಸಿಂಪಡಿಸದಿರುವ ತುಳಸಿ ಖರೀದಿಗೆ ವ್ಯವಸ್ಥೆ ಮಾಡಲಾಗಿದೆಯೆಂದು ದೇಗುಲ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next